Karnataka news paper

ಶಿವರಾಜ್ ಕೆ.ಆರ್‌. ಪೇಟೆ-ನಯನಾ ಜೋಡಿಯ ‘ಧಮಾಕ’ ಚಿತ್ರಕ್ಕೆ ಯೋಗರಾಜ್ ಭಟ್ ಸಾಥ್


ಹೈಲೈಟ್ಸ್‌:

  • ಶಿವರಾಜ್ ಕೆ.ಆರ್. ಪೇಟೆ ನಟನೆಯ ಹೊಸ ಸಿನಿಮಾ ‘ಧಮಾಕ’
  • ‘ಧಮಾಕ’ ಸಿನಿಮಾದಲ್ಲಿ ಶಿವರಾಜ್ ಕೆ.ಆರ್. ಪೇಟೆಗೆ ನಯನಾ ನಾಯಕಿ
  • ಈ ಚಿತ್ರಕ್ಕೆ ಸಾಥ್ ನೀಡಿದ ನಿರ್ದೇಶಕ ಯೋಗರಾಜ್ ಭಟ್

ಕಾಮಿಡಿ ಕಿಲಾಡಿಗಳು‘ ರಿಯಾಲಿಟಿ ಶೋನಿಂದ ಗುರುತಿಸಿಕೊಂಡ ಪ್ರತಿಭೆ ಶಿವರಾಜ್ ಕೆ.ಆರ್. ಪೇಟೆ. ಸದ್ಯ ಶಿವರಾಜ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಆಫರ್‌ಗಳಿವೆ. ಸ್ಟಾರ್ ನಟರ ಸಿನಿಮಾಗಳಲ್ಲಿ ಪೋಷಕ ಪಾತ್ರ, ಹಾಸ್ಯ ಪಾತ್ರಗಳನ್ನು ಮಾಡುತ್ತಲೇ ‘ನಾನು ಮತ್ತು ಗುಂಡ’ ಸಿನಿಮಾದಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿದ್ದರು. ಆ ಸಿನಿಮಾಗೂ ಕೂಡ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅವರು ಮತ್ತೊಂದು ಸಿನಿಮಾದಲ್ಲೂ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ‘ಧಮಾಕ’ ಅಂತ ಹೆಸರಿಡಲಾಗಿದೆ. ವಿಶೇಷವೆಂದರೆ, ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ‘ಧಮಾಕ’ಗೆ ಸಾಥ್ ನೀಡಿರುವುದು ವಿಶೇಷ.

ಟೀಸರ್‌ನಲ್ಲಿ ಭಟ್ಟರ ಧ್ವನಿ
ಈಚೆಗೆ ಧಮಾಕ ಟೀಸರ್ ರಿಲೀಸ್ ಆಗಿದ್ದು, ಶಿವರಾಜ್ ಕೆ.ಆರ್‌. ಪೇಟೆ (Shivaraj KR Pete) ಅವರ ಪಾತ್ರ ಪರಿಚಯ ಮಾಡಿಕೊಡುವಂತಿದೆ ಈ ಟೀಸರ್. ವಿಶೇಷವೆಂದರೆ, ಈ ಟೀಸರ್‌ಗೆ ಯೋಗರಾಜ್ ಭಟ್ ಅವರು ಹಿನ್ನಲೆ ಧ್ವನಿ ನೀಡಿದ್ದಾರೆ. ಸಖತ್ ಕಾಮಿಡಿಯಾಗಿರುವ ಈ ಟೀಸರ್ ನೋಡುಗರಿಗೆ ಇಷ್ಟವಾಗಿದೆ. ಯೋಗರಾಜ್ ಭಟ್ ಮತ್ತು ಶಿವರಾಜ್ ಅವರ ಕಾಂಬಿನೇಷನ್‌ ಇಷ್ಟವಾಗಿದೆ. ಭಟ್ಟರ ಟಿಪಿಕಲ್ ಸಂಭಾಷಣೆಗಳು ಸಖತ್ ಎಂಟರ್‌ಟೈನಿಂಗ್ ಆಗಿವೆ. ಸಿನಿಮಾದಲ್ಲೂ ಯೋಗರಾಜ್ ಭಟ್ ಅವರ ಧ್ವನಿ ಇರಲಿದೆಯೇ? ಗೊತ್ತಿಲ್ಲ. ಸದ್ಯಕ್ಕಂತೂ ಟೀಸರ್ ಸುದ್ದಿಯಾಗಿದೆ.

ಶಿವರಾಜ್‌ಗೆ ನಯನಾ ಜೋಡಿ

‘ಕಾಮಿಡಿ ಕಿಲಾಡಿಗಳು’ (Comedy Khiladigalu ) ಶೋನಲ್ಲಿ ಮಿಂಚಿದ ಮತ್ತೋರ್ವ ಕಲಾವಿದೆ ನಯನಾ (Nayana). ಇದೀಗ ನಯನಾ ಕೂಡ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಧಮಾಕ’ ಸಿನಿಮಾದಲ್ಲಿ (Dhamaka movie) ಅವರು ಕೂಡ ಇದ್ದಾರೆ. ಇಬ್ಬರ ಕಾಂಬಿನೇಷನ್‌ ತೆರೆಮೇಲೆ ನೋಡುವುದಕ್ಕೆ ಸಿನಿಪ್ರಿಯರು ಕಾದಿದ್ದಾರೆ. ನಿರ್ದೇಶಕ ‘ಸಿಂಪಲ್’ ಸುನಿ ಜೊತೆಗೆ ಕೆಲಸ ಮಾಡಿದ ಅನುಭವ ಇರುವ ಲಕ್ಷ್ಮೀ ರಮೇಶ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾವಾಗಿದೆ. ಎಸ್‌ಆರ್ ಮೀಡಿಯಾ ಪ್ರೊಡಕ್ಷನ್ಸ್‌ ಮತ್ತು ನಂದಿ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಸುನೀಲ್ ಎಸ್‌. ರಾಜ್ ಮತ್ತು ಅನ್ನಪೂರ್ಣ ಬಿ. ಪಾಟೀಲ್ ಈ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.

ಪರಭಾಷೆಗಳಲ್ಲಿ ಮಿಂಚಲಿದೆ ಶಿವರಾಜ್‌ ಕೆ.ಆರ್‌. ಪೇಟೆ ನಟನೆಯ ‘ನಾನು ಮತ್ತು ಗುಂಡ’!

ಶಿವರಾಜ್ ಕೆ.ಆರ್. ಪೇಟೆ, ನಯನಾ ಜೊತೆಗೆ ಸಿದ್ದು ಮೂಲಿಮನಿ, ‘ಗಟ್ಟಿಮೇಳ’ ಧಾರವಾಹಿ ಖ್ಯಾತಿಯ ಪ್ರಿಯಾ ಆಚಾರ್, ಪ್ರಕಾಶ್‌ ತುಮ್ಮಿನಾಡ್, ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣವನ್ನು ಹಾಲೇಶ್ ಮಾಡಿದ್ದು, ವಿಕಾಸ್ ವಸಿಷ್ಠ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಕಲನದ ಹೊಣೆ ವಿನಯ್ ಕೂರ್ಗ್ ಅವರದ್ದು.

‘ಎಲ್ಲಾ ಕೊರೊನಾ ವಾರಿಯರ್ಸ್‌ ಪಾದಕ್ಕೆ ಶರಣು’ ಎಂದ ‘ಕಾಮಿಡಿ ಕಿಲಾಡಿ’ ಶಿವರಾಜ್ ಕೆ.ಆರ್. ಪೇಟೆ



Read more