Karnataka news paper

ಕಾಮಗಾರಿಗೆ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶ:ಇನ್ಮುಂದೆ ಆನ್‌ಲೈನ್‌ನಲ್ಲೇ ಗ್ರಾಮೀಣ ಕಾಮಗಾರಿಗಳ ಬಿಲ್‌ ಪಾವತಿ


ಹೈಲೈಟ್ಸ್‌:

  • ಗ್ರಾಮೀಣ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ನಿಖರತೆಗಾಗಿ ‘ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶ
  • ಈ ತಂತ್ರಾಂಶದಿಂದ ಕಾಮಗಾರಿಗಳ ನಕಲು ತಡೆಯಬಹುದು
  • ಆನ್‌ಲೈನ್‌ನಲ್ಲೇ ಗುತ್ತಿಗೆದಾರರಿಗೆ ಬಿಲ್‌ ಪಾವತಿ ವ್ಯವಸ್ಥೆ

ಬೆಂಗಳೂರು: ಗ್ರಾಮೀಣ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ನಿಖರತೆಗಾಗಿ ‘ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶ‘ ಉನ್ನತೀಕರಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ‘ಗಾಂಧಿ ಸಾಕ್ಷಿ ಕಾಯಕ 2.0’ ತಂತ್ರಾಂಶವನ್ನು ವಿಧಾನಸೌಧದಲ್ಲಿ ಬಿಡುಗಡೆಗೊಳಿಸಿತು. ಸಚಿವ ಕೆ.ಎಸ್‌. ಈಶ್ವರಪ್ಪ, ಸುನಿಲ್‌ ಕುಮಾರ್‌, ಪಂಚಾಯತ್‌ರಾಜ್‌, ಇ-ಆಡಳಿತ ಇಲಾಖೆ ಆಯುಕ್ತೆ ಶಿಲ್ಪಾನಾಗ್‌ ತಂತ್ರಾಂಶ ಬಿಡುಗಡೆ ಮಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳಲಿರುವ ರಾಜ್ಯ ಸರಕಾರದ ಯಾವುದೇ ಸಿವಿಲ್‌ ಕಾಮಗಾರಿಗಳ ಪ್ರಸ್ತಾವನೆಯಿಂದ ಟೆಂಡರ್‌, ಗುತ್ತಿಗೆದಾರರ ಮಾಹಿತಿ, ಭೌತಿಕ ಪ್ರಗತಿ ಮತ್ತು ಆನ್‌ಲೈನ್‌ ಪಾವತಿವರೆಗೂ ಹಂತ-ಹಂತದ ಮಾಹಿತಿಯನ್ನು ಅಳವಡಿಸುವ ತಂತ್ರಾಂಶ ಇದಾಗಿದೆ. ಕಾಮಗಾರಿ ಆರಂಭಿಸುವ ಮುನ್ನವೇ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಪ್ರದೇಶದ ಭೌಗೋಳಿಕ ಚಿತ್ರವನ್ನು ಗುರುತಿಸುವ ವಿಧಾನವನ್ನು ಈ ತಂತ್ರಾಂಶ ಹೊಂದಿದೆ.
ಇಂಟರ್‌ನೆಟ್ ಇಲ್ಲದೆಯೂ ಹಣ ವರ್ಗಾವಣೆ ಸೇವೆ ಹೇಗಿರಲಿದೆ?..RBI ಮಾರ್ಗಸೂಚಿ ನೋಡಿ!
ನಕಲು ತಡೆ
ಈ ತಂತ್ರಾಂಶದಿಂದ ಕಾಮಗಾರಿಗಳ ನಕಲು(ಡುಪ್ಲಿಕೇಷನ್‌) ತಡೆಯಬಹುದು ಹಾಗೂ ಭೌತಿಕ ಪ್ರಗತಿಯನ್ನು ಹಂತ-ಹಂತವಾಗಿ ತಂತ್ರಾಂಶದಲ್ಲಿ ಅಳವಡಿಸಬಹುದು. ಆನ್‌ಲೈನ್‌ನಲ್ಲೇ ಗುತ್ತಿಗೆದಾರರಿಗೆ ಬಿಲ್‌ ಪಾವತಿ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.

ಯಾಕೆ ಹೊಸ ತಂತ್ರಾಂಶ?
ಮೊದಲಿನ ತಂತ್ರಾಂಶದಲ್ಲಿ ನಾನಾ ನ್ಯೂನತೆಗಳು ಇದ್ದವು. ಹೀಗಾಗಿ, ಹಣ ದುರುಪಯೋಗಪಡಿಸಿಕೊಂಡ ಹಲವು ಪ್ರಕರಣಗಳು ಬೆಳೆಕಿಗೆ ಬಂದಿವೆ. ಗುತ್ತಿಗೆದಾರರಿಗೆ ಕಾಮಗಾರಿಗಳ ಬಿಲ್‌ ಪಾವತಿಸುವ ಸಂದರ್ಭದಲ್ಲೇ ಆಯಾ ಕಾಮಗಾರಿಗಳ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ತಂತ್ರಾಂಶದಲ್ಲಿಅಳವಡಿಸಿ ಬಿಲ್‌ ಪಾವತಿ ಮಾಡಲಾಗುತ್ತಿತ್ತು. ಈ ಪ್ರಕ್ರಿಯೆಯಿಂದ ಕಾಮಗಾರಿಗಳ ನಿಖರ ಮಾಹಿತಿ ಸರಕಾರದ ಹಂತದಲ್ಲಿ ದೊರೆಯುತ್ತಿರಲಿಲ್ಲ ಮತ್ತು ಕಾಮಗಾರಿ ಗುಣಮಟ್ಟದ ಬಗ್ಗೆಯೂ ಅನುಮಾನಗಳು ಮೂಡುತ್ತಿದ್ದವು. ಈ ಹಿನ್ನೆಲೆಯಲ್ಲಿ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಒಂದೇ ಸ್ಥಳದಲ್ಲಿ ಎರಡೆರಡು ಕಾಮಗಾರಿಗೆ ಬಿಲ್‌ ಪಡೆಯುವ ಅಕ್ರಮಕ್ಕೆ ತಡೆ ನೀಡಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ.

ಗ್ರಾಮೀ ಸರ್ಕಾರಿ ಕಾಮಗಾರಿಗಳ ಜಿಎಸ್‌ಟಿ ಶೇ.12 ರಿಂದ ಶೇ.18ಕ್ಕೆ ಏರಿಕೆ: ಗುತ್ತಿಗೆದಾರರು ಗರಂ..!ಣ ಪ್ರದೇಶದಲ್ಲಿ ನಿರ್ಮಿತಿ ಕೇಂದ್ರ, ಗ್ರಾಪಂ, ಕೆಆರ್‌ಐಡಿಎಲ್‌ ಸೇರಿ ಹಲವು ಸಂಸ್ಥೆಗಳು ಸಿವಿಲ್‌ ಕಾಮಗಾರಿಗಳನ್ನು ನಡೆಸುತ್ತಿವೆ. ಈ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ತರಲು ಮತ್ತು ಪಾರದರ್ಶಕತೆ ತರಲು ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ.
ಕೆ.ಎಸ್‌.ಈಶ್ವರಪ್ಪ, ಸಚಿವ



Read more

[wpas_products keywords=”deal of the day sale today offer all”]