Karnataka news paper

ಪ್ರಧಾನಿಗೆ ತೊಂದರೆ ಆಗಿದ್ದು 15 ನಿಮಿಷ ಮಾತ್ರ, ಆದರೆ ರೈತರು ಅನುಭವಿಸಿದ್ದು ಒಂದು ವರ್ಷ: ಸಿಧು ಟೀಕೆ


ಹೈಲೈಟ್ಸ್‌:

  • ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಬಗ್ಗೆ ಸಿಧು ವ್ಯಂಗ್ಯ
  • ಪ್ರಧಾನಿ ಮೋದಿ 15 ನಿಮಿಷ ಮಾತ್ರ ಕಾಯುವ ತೊಂದರೆಗೆ ಒಳಗಾಗಿದ್ದರು
  • ಆದರೆ ರೈತರು ದಿಲ್ಲಿ ಗಡಿಗಳಲ್ಲಿ ಒಂದೂವರೆ ವರ್ಷ ನೆಲೆಯೂರಿ ಕಾದಿದ್ದರು
  • ಖಾಲಿ ಕುರ್ಚಿಗಳಿಂದ ಗಮನ ಬೇರೆಡೆ ತಿರುಗಿಸಲು ನಡೆಸಿದ ಪ್ರಯತ್ನವಿದು

ಚಂಡೀಗಡ: ಪಂಜಾಬ್‌ನಲ್ಲಿ ರೈತರ ಪ್ರತಿಭಟನೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ದೊಡ್ಡ ವೈಫಲ್ಯವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವ್ಯಂಗ್ಯವಾಡಿದ್ದಾರೆ. ‘ನರೇಂದ್ರ ಮೋದಿ ಅವರು 15 ನಿಮಿಷವಷ್ಟೇ ಕಾಯುವ ತೊಂದರೆಗೆ ಒಳಗಾಗಿದ್ದಾರೆ. ಆದರೆ ರೈತರು ಕೃಷಿ ಕಾಯ್ದೆಗಳು ರದ್ದಾಗಲು ಒಂದು ವರ್ಷಕ್ಕೂ ಅಧಿಕ ಸಮಯ ಕಾದಿದ್ದರು’ ಎಂದು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಲು ಬುಧವಾರ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು, ಫಿರೋಜ್‌ಪುರದ ಹೆದ್ದಾರಿಯಲ್ಲಿ ರೈತರ ಪ್ರತಿಭಟನೆಯಿಂದ ಫ್ಲೈ ಓವರ್ ಮೇಲೆ ಕೆಲ ಸಮಯ ನಿಲ್ಲುವಂತಾಗಿತ್ತು. ಪ್ರಧಾನಿ ಅವರು ಎರಡು ವರ್ಷಗಳ ಬಳಿಕ ಪಂಜಾಬ್‌ಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಪಂಜಾಬ್‌ ಪೊಲೀಸ್‌ ಗಂಭೀರ ವೈಫಲ್ಯ: ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರದ ಚಿಂತನೆ
‘ನಾನು ಪ್ರಧಾನ ಮಂತ್ರಿ ಸಾಹೇಬರನ್ನು ಕೇಳಲು ಬಯಸುತ್ತೇನೆ, ನಮ್ಮ ರೈತ ಸಹೋದರರು ದಿಲ್ಲಿಯ ಗಡಿಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಮೊಕ್ಕಾಂ ಹೂಡಿದ್ದರು. ನನಗೆ ಹೇಳಿ, ಅವರು ಒಂದೂವರೆ ವರ್ಷ ಅಲ್ಲಿ ಉಳಿದುಕೊಂಡಿದ್ದರು. ನೀವು ಮಾಧ್ಯಮದವರು ಏನನ್ನೂ ಹೇಳಲಿಲ್ಲ. ಆದರೆ ನೀವು ನಿನ್ನೆ 15 ವರ್ಷ ಕಾಯುವಂತೆ ಆಗಿತ್ತು. ಈ ಡಬಲ್ ಸ್ಟ್ಯಾಂಡರ್ಡ್ ಏಕೆ?’ ಎಂದು ಸಿಧು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಅವರ ಭದ್ರತಾ ಲೋಪ ಎಂಬ ಕಾರಣವು ದೊಡ್ಡ ರಾಜಕೀಯ ನಾಟಕ. ಫಿರೋಜ್‌ಪುರ ಸಮಾವೇಶದಲ್ಲಿನ ಜನರ ಹಾಜರಾತಿ ಕೊರತೆಯಿಂದ ಗಮನವನ್ನು ಬೇರೆಡೆ ಸೆಳೆಯಲು ಇಡೀ ಘಟನೆಯನ್ನು ವ್ಯವಸ್ಥಿತವಾಗಿ ಸಂಯೋಜನೆ ಮಾಡಲಾಗಿತ್ತು ಎಂದು ಸಿಧು ಆರೋಪಿಸಿದ್ದಾರೆ.

‘ನಾಚಿಕೆ ಇಲ್ಲದ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ (ಅಮರಿಂದರ್ ಸಿಂಗ್) ಅವರಂತೆ ಪ್ರಧಾನಿ ಖಾಲಿ ಕುರ್ಚಿಗಳನ್ನು ಉದ್ದೇಶಿಸಿ ಭಾಷಣ ಮಾಡಲು ಸಾಧ್ಯವಿಲ್ಲ. ಭದ್ರತಾ ಬೆದರಿಕೆಯ ಆರೋಪದ ಮೂಲಕ ಮಾಧ್ಯಮಗಳ ಗಮನವನ್ನು ಬೇರೆಡೆ ತಿರುಗಿಸಲು ಹಾಗೂ 70,000 ಕುರ್ಚಿಗಳಲ್ಲಿ 500 ಜನರಿಗೆ ಭಾಷಣ ಮಾಡುವ ಅವಮಾನದಿಂದ ಬಚಾವಾಗಲು ಇದೊಂದೇ ಮಾರ್ಗವಾಗಿತ್ತು’ ಎಂದು ಅವರು ಲೇವಡಿ ಮಾಡಿದ್ದಾರೆ.
ಹಿಂದಿನ ಘಟನೆಗಳಿಂದ ನಾವು ಕಲಿಯಬೇಕು: ಪ್ರಧಾನಿ ಮೋದಿ ಭದ್ರತಾ ಲೋಪದ ಬಗ್ಗೆ ದೇವೇಗೌಡ ಹೇಳಿಕೆ
ಕೀಳು ನಾಟಕ: ಸಿಎಂ ಚನ್ನಿ
ಪ್ರಧಾನಿ ಮೋದಿ ಅವರ ಭದ್ರತಾ ಲೋಪದ ‘ಜೀವ ಬೆದರಿಕೆ ಗಿಮಿಕ್’, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಉರುಳಿಸುವ ಗುರಿ ಹೊಂದಿತ್ತು ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಆರೋಪಿಸಿದ್ದಾರೆ.

ಪ್ರಧಾನಿಯು ದೇಶದ ಗೌರವಾನ್ವಿತ ನಾಯಕ. ಆದರೆ ಅಂತಹ ಕೀಳು ನಾಟಕಗಳನ್ನು ಮಾಡುವ ಮಟ್ಟಕ್ಕೆ ಹುದ್ದೆಯ ಘನತೆಯನ್ನು ಇಳಿಸಬಾರದಿತ್ತು ಎಂದು ಚನ್ನಿ ಟೀಕಿಸಿದ್ದಾರೆ. ಪ್ರಧಾನಿಯ ಜೀವಕ್ಕೆ ಯಾವುದೇ ಬೆದರಿಕೆ ಇರಲಿಲ್ಲ. ಅವರು ಫಿರೋಜ್‌ಪುರದ ಸಮಾವೇಶದಲ್ಲಿ ಜನರ ಕೊರತೆ ಇದ್ದಿದ್ದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು ಎಂದು ಹೇಳಿದ್ದಾರೆ.



Read more

[wpas_products keywords=”deal of the day sale today offer all”]