Karnataka news paper

ಭರಮಸಾಗರದಲ್ಲಿ ಸಾವಯವ ಡ್ರ್ಯಾಗನ್‌ ಹಣ್ಣಿನ ಕೃಷಿ; ಉತ್ತಮ ಆದಾಯದ ನಿರೀಕ್ಷೆ!


| Vijaya Karnataka | Updated: Dec 13, 2021, 9:57 AM

ನಾಟಿ ಮಾಡಿರುವ ಡ್ರ್ಯಾಗನ್‌ ಫ್ರೂಟ್ಸ್‌ಗೆ ಹೆಚ್ಚು ನೀರಿನ ಅವಶ್ಯಕತೆಯಿಲ್ಲ. ಅದರಲ್ಲೂ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಈ ಬೆಳೆಗೆ ಪೂರಕವಾಗದ ಪರಿಸರವಿದೆ. ಹೆಚ್ಚು ಬಿಸಿಲಿನಲ್ಲಿ ಈ ಬೆಳೆ ಉತೃಷ್ಟವಾಗಿ ಬರುತ್ತದೆ. ಡ್ರ್ಯಾಗನ್‌ ಫ್ರೂಟ್‌ ಬೆಳೆಗೆ ರಾಸಾಯನಿಕ ಗೊಬ್ಬರ, ಔಷಧಿ ಸಿಂಪಡಿಸುವಂತಿಲ್ಲ. ಕೊಟ್ಟಿಗೆ ಗೊಬ್ಬರ ಬಳಸಿದರೆ ಮಾತ್ರ ಉತ್ತಮವಾಗಿ ಬೆಳೆ ಬೆಳೆಯಬಹುದು.

 

ಡ್ರ್ಯಾಗನ್‌ ಫ್ರೂಟ್‌

ಸಾಂದರ್ಭಿಕ ಚಿತ್ರ

ಸೋಮನಗೌಡ ಎಸ್‌.ಎಂ ಭರಮಸಾಗರ
ಚಿತ್ರದುರ್ಗ: ರೈತರ ಮಿನಿ ತರಕಾರಿ ಮಾರುಕಟ್ಟೆ ಎಂದೇ ಫೇಮಸ್‌ ಆಗಿರುವ ಭರಮಸಾಗರ ಹೋಬಳಿಯ ಇಸಾಮುದ್ರ ಹೊಸಹಟ್ಟಿಯಲ್ಲಿ ಮೊದಲ ಬಾರಿಗೆ ರೈತನೊಬ್ಬ ಡ್ರ್ಯಾಗನ್‌ ಫ್ರೂಟ್ಸ್‌ ಸಸಿ ನೆಟ್ಟು ಉತ್ತಮ ಫಲ ನಿರೀಕ್ಷೆಯಲ್ಲಿದ್ದಾರೆ. ಈ ಹಳ್ಳಿ ತರಕಾರಿ ಬೆಳೆಗೆ ಹೆಸರುವಾಸಿಯಾಗಿದ್ದು, ಹೊಸ ಪ್ರಯೋಗದ ಹಾದಿಯಲ್ಲಿ ಇಸಾಮುದ್ರ ಹೊಸಹಟ್ಟಿ ರೈತ ಕೃಷಿಕ ಅಂಜಿನಪ್ಪ ಮೊದಲ ಬಾರಿಗೆ ಸಾವಯವ ಡ್ರ್ಯಾಗನ್‌ ಫ್ರೂಟ್ಸ್‌ ಬೆಳೆದು ಪ್ರಯೋಗಶೀಲ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಡ್ರ್ಯಾಗನ್‌ ಫ್ರುಟ್‌ ಥೈಲ್ಯಾಂಡ್‌, ವಿಯಟ್ನಾಂ, ಶ್ರೀಲಂಕಾ ದೇಶಗಳಲ್ಲಿ ಜನಪ್ರಿಯ. ಸ್ಟಾರ್‌ ಹೋಟೆಲ್‌ಗಳ ಕಾಕ್ಟೆಲ್‌ ಜ್ಯೂಸ್‌, ಫ್ರುಟ್‌ ಪ್ಲೆಟ್‌ಗಳಲ್ಲಿ ಈ ಹಣ್ಣಿಗೆ ಸ್ಥಾನವಿದೆ. ಕಡಿಮೆ ಸಕ್ಕರೆ ಅಂಶ, ಅಧಿಕ ಐರನ್‌, ಕ್ಯಾಲ್ಶಿಯಂ, ವಿಟಮಿನ್‌ ಹೊಂದಿರುವ ಈ ಹಣ್ಣು ಆರೋಗ್ಯಕ್ಕೆ ಪೂರಕ. ಮಾಲ್‌ಗಳಲ್ಲಿ ಹಣ್ಣು ಮಾರಾಟಕ್ಕೆ ಇದ್ದರೂ ರೈತರಿಗೆ ಇದು ಹೊಸ ಬೆಳೆ. ಆಮದಾಗುವ ”ಡ್ರ್ಯಾಗನ್‌ ಫ್ರೂಟ್‌ಗಿಂತ ಸ್ಥಳೀಯವಾಗಿ ಬೆಳೆದ ಹಣ್ಣು ಖರೀದಿಸಲು ವ್ಯಾಪಾರಿಗಳೂ ಆಸಕ್ತಿ ತೋರುತ್ತಿರುವ ಪರಿಣಾಮ ಹೆಚ್ಚು ರೈತರು ”ಡ್ರ್ಯಾಗನ್‌” ಹಣ್ಣಿನ ಬೇಸಾಯ ಮಾಡುತ್ತಿದ್ದಾರೆ.
ಮೆಣಸಿನಕಾಯಿ ಬೆಳೆ ಮಳೆಗೆ ಆಹುತಿ: ಬಂಗಾರದ ಬೆಲೆ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್‌..!
ತಮ್ಮ ಒಂದು ಎಕರೆ ಜಾಗದಲ್ಲಿ ಡ್ರ್ಯಾಗನ್‌ ಫ್ರೂಟ್ಸ್‌ ಗಿಡಗಳನ್ನು ನಾಟಿ ಮಾಡಿ ಕಲ್ಲುಕಂಬಗಳನ್ನು ನೆಟ್ಟು ಹನಿ ನೀರಾವರಿ ಅಳವಡಿಸಿಕೊಂಡು ಕಡಿಮೆ ನೀರಿನಲ್ಲಿ ಡ್ರ್ಯಾಗನ್‌ ಫ್ರೂಟ್ಸ್‌ ಬೆಳೆಯಲು ಶ್ರಮ ಹಾಕುತ್ತಿದ್ದಾರೆ. ತರಕಾರಿ ಬೆಳೆಗಳು ಲಾಟರಿ ಇದ್ದಂತೆ. ಅತಿವೃಷ್ಟಿಯಾದಾಗ ಲಾಭಕ್ಕಿಂತ ನಷ್ಟವೇ ಜಾಸ್ತಿ. ಯಾವಾಗಲೋ ಒಮ್ಮೆ ಹೆಚ್ಚು ಆದಾಯ ಬರುವ ತರಕಾರಿ ಶ್ರಮದ ಜತೆಗೆ ಅಧಿಕ ಖರ್ಚು. ಆದರೆ ಡ್ರ್ಯಾಗನ್‌ ಫ್ರೂಟ್ಸ್‌ನಿಂದ ನಿರಂತರ ಆದಾಯ ಗಳಿಸಬಹುದು ಇದಕ್ಕೆ ಬದ್ಧತೆ, ಶ್ರಮ ಮತ್ತು ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು ಎನ್ನುತ್ತಾರೆ ರೈತ ಆಂಜಿನಪ್ಪ.
ಒಂದೂವರೆ ಎಕರೆಯಲ್ಲಿ ಟೊಮೇಟೊ, 15 ಲಕ್ಷ ಆದಾಯ; ಹುಚ್ಚವ್ವನಹಳ್ಳಿ ಸಹೋದರರ ಸಕ್ಸಸ್ ಸ್ಟೋರಿ ಇಲ್ಲಿದೆ!
ಎಷ್ಟು ಖರ್ಚು
ನಾಲ್ಕು ತಿಂಗಳ ಹಿಂದೆ ಅಂಜಿನಪ್ಪ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಹಿರಿಯೂರು ಮತ್ತು ಮಲೆಮಾಚಿಕೆರೆಯಿಂದ ಗಿಡಗಳನ್ನು ತರಿಸಿ 1750 ಡ್ರ್ಯಾಗನ್‌ ಫ್ರೂಟ್ಸ್‌ ಸಸಿ ನೆಟ್ಟಿದ್ದಾರೆ. ಅದಕ್ಕೆ ಕಲ್ಲುಕಂಬಗಳನ್ನು ಹಾಕಿದ್ದು ಒಂದು ಕಲ್ಲುಕಂಬಕ್ಕೆ 300 ರೂ ವಿನಿಯೋಗಿಸಿದ್ದಾರೆ. ಗಿಡ ಬೆಳೆದಂತೆ ಅದಕ್ಕೆ ಬೇಕಾಗುವ ಟಯರ್‌, ವಯರ್‌ ಮತ್ತಿತರ ಸಕಲಕರಣೆಗಳ ಎಲ್ಲ ಖರ್ಚು ಎಲ್ಲ ಸೇರಿ ಅಂದಾಜು 4 ಲಕ್ಷ ರೂ. ಆಗಬಹುದು. ನಾಟಿ ಮಾಡಿದ 13 ತಿಂಗಳ ನಂತರ ಡ್ರ್ಯಾಗನ್‌ ಫ್ರೂಟ್ಸ್‌ಗಳು ಬಿಡುವ ನಿರೀಕ್ಷೆಯಲ್ಲಿದ್ದಾರೆ.
ಸಿರುಗುಪ್ಪದಲ್ಲಿ ನಿವೃತ್ತ ನೌಕರನ ‘ಮಣ್ಣು’ ಪ್ರೇಮ; ಸಮಗ್ರ ಕೃಷಿ ಮೂಲಕ ಆದಾಯ ದ್ವಿಗುಣ!
ಸಾವಯುವ ಡ್ರ್ಯಾಗನ್‌ ಪ್ರೂಟ್‌ ಕೃಷಿ
ನಾಟಿ ಮಾಡಿರುವ ಡ್ರ್ಯಾಗನ್‌ ಫ್ರೂಟ್ಸ್‌ಗೆ ಹೆಚ್ಚು ನೀರಿನ ಅವಶ್ಯಕತೆಯಿಲ್ಲ. ಅದರಲ್ಲೂ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಈ ಬೆಳೆಗೆ ಪೂರಕವಾಗದ ಪರಿಸರವಿದೆ. ಹೆಚ್ಚು ಬಿಸಿಲಿನಲ್ಲಿ ಈ ಬೆಳೆ ಉತೃಷ್ಟವಾಗಿ ಬರುತ್ತದೆ. ಡ್ರ್ಯಾಗನ್‌ ಫ್ರೂಟ್‌ ಬೆಳೆಗೆ ರಾಸಾಯನಿಕ ಗೊಬ್ಬರ, ಔಷಧಿ ಸಿಂಪಡಿಸುವಂತಿಲ್ಲ. ಕೊಟ್ಟಿಗೆ ಗೊಬ್ಬರ ಬಳಸಿದರೆ ಮಾತ್ರ ಉತ್ತಮವಾಗಿ ಬೆಳೆ ಬೆಳೆಯಬಹುದು. ಹೀಗಾಗಿ ಅಂಜಿನಪ್ಪ ಅವರು ತಮ್ಮ ಹೊಲದ ಡ್ರ್ಯಾಗನ್‌ ಫ್ರೂಟ್‌ಗೆ ಸಾವಯವ ಗೊಬ್ಬರ ಹಾಕುತ್ತಿದ್ದಾರೆ. ಒಮ್ಮೆ ಈ ಬೆಳೆ ಹಾಕಿದರೆ 20 ವರ್ಷ ನಿರಂತರವಾಗಿ ಬೆಳೆ ಬೆಳೆಯಬಹುದು. ಆ ಬೆಳೆಯಿಂದಲೇ ಬರುವ ಬಲಿತ ಗಣ್ಣುಗಳನ್ನು ಕತ್ತರಿಸಿ ಪ್ಯಾಕೇಟ್‌ನಲ್ಲಿ ನಾಟಿ ಮಾಡಿ ಸಸಿಗಳನ್ನು ಬೇರೆ ರೈತರಿಗೂ ಮಾರಾಟ ಮಾಡಬಹುದು.

ಸಮೀಪದ ನಗರಗಳ ಸುದ್ದಿ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ

Web Title : farmers can earn huge profits by growing dragon fruits
Kannada News from Vijaya Karnataka, TIL Network



Read more