Karnataka news paper

‘ಶೌರ್ಯವಲ್ಲ, ಇದು ಮೂರ್ಖತನ’: ಪಂತ್‌ ವಿರುದ್ಧ ಗಂಭೀರ್‌ ಗುಡುಗು!


ಹೈಲೈಟ್ಸ್‌:

  • ಬೇಜವಾಬ್ದಾರಿಯುತವಾಗಿ ವಿಕೆಟ್‌ ಒಪ್ಪಿಸಿದ ರಿಷಭ್‌ ಪಂತ್ ವಿರುದ್ದ ಗಂಭೀರ್‌ ಆಕ್ರೋಶ.
  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿ.
  • ಬುಧವಾರ ಬೇಜವಾಬ್ದಾರಿಯುತ ಹೊಡೆತಕ್ಕೆ ಕೈ ಹಾಕಿ ವಿಕೆಟ್‌ ಒಪ್ಪಿಸಿದ್ದ ರಿಷಭ್‌ ಪಂತ್‌.

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಬೇಜವಾಬ್ದಾರಿಯುತ ಹೊಡೆತಕ್ಕೆ ಕೈ ಹಾಕಿ ವಿಕೆಟ್‌ ಒಪ್ಪಿಸಿದ್ದ ರಿಷಭ್‌ ಪಂತ್‌ ವಿರುದ್ಧ ಮಾಜಿ ಆರಂಭಿಕ ಗೌತಮ್‌ ಗಂಭೀರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಲಾ ಅರ್ಧಶತಕಗಳನ್ನು ಸಿಡಿಸಿ ಭಾರತ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟಿದ್ದ ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರನ್ನು ಕಗಿಸೊ ರಬಾಡ ಔಟ್‌ ಮಾಡಿ ತಮ್ಮ ತಂಡದ ಕಮ್‌ಬ್ಯಾಕ್‌ಗೆ ನೆರವಾಗಿದ್ದರು. ಭಾರತ ತಕ್ಷಣ ಎರಡು ಪ್ರಮುಖ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ವೇಳೆ ಹನುಮ ವಿಹಾರಿ ಜೊತೆ ಕ್ರೀಸ್‌ನಲ್ಲಿದ್ದ ರಿಷಭ್‌ ಪಂತ್‌ಗೆ ತಂಡವನ್ನು ಸಂಕಷ್ಟದಿಂದ ಪಾರು ಮಾಡಬೇಕಾದ ಅಗತ್ಯವಿತ್ತು. ಆದರೆ, ಆಡಿದ ಮೂರನೇ ಎಸೆತದಲ್ಲಿ ಕಗಿಸೊ ರಬಾಡಗೆ ಪಂತ್‌ ಮುಂದೆ ಬಂದು ದೊಡ್ಡ ಹೊಡೆತಕ್ಕೆ ಕೈ ಹಾಕಿದರು. ಆದರೆ, ಚೆಂಡನ್ನು ಸರಿಯಾಗಿ ಅರಿಯುವಲ್ಲಿ ವಿಫಲರಾಗಿ ವಿಕೆಟ್‌ ಕಿಪರ್‌ಗೆ ಸುಲಭ ಕ್ಯಾಚಿತ್ತರು. ಆ ಮೂಲಕ ಕೇವಲ 12 ರನ್‌ ಅಂತರದಲ್ಲಿ ಭಾರತ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾರತ Vs ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯದ ಸ್ಕೋರ್‌ಕಾರ್ಡ್

ಇದಕ್ಕೂ ಮುನ್ನ ಎರಡನೇ ದಿನ ದಕ್ಷಿಣ ಆಫ್ರಿಕಾ ಇನಿಂಗ್ಸ್‌ನಲ್ಲಿ ಕಾಟ್‌ ಬಿಹೈಂಡ್‌ ವಿಚಾರವಾಗಿ ರಾಸ್ಸಿ ವ್ಯಾನ್‌ ಡೆರ್‌ ಡುಸ್ಸೆನ್‌ ಹಾಗೂ ರಿಷಭ್‌ ಪಂತ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಪಂತ್‌, ‘ನಿನಗೆ ಸರಿಯಾದ ಜ್ಞಾನ ಇಲ್ಲವಾದರೆ, ಬಾಯಿ ಮುಚ್ಚಿಕೊಂಡು ಇರು’ ಎಂದು ಡುಸ್ಸೆನ್‌ಗೆ ಹೇಳಿದ್ದರು. ಈ ಕಾರಣದಿಂದಲೇ ಪಂತ್‌ ಈ ರೀತಿ ದೊಡ್ಡ ಹೊಡೆತಕ್ಕೆ ಕೈ ಹಾಕಿರಬಹುದು ಎಂದು ಗಂಭೀರ್‌ ಮೂರನೇ ದಿನದಾಟದ ಭೋಜನ ವಿರಾಮದ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

“ಸ್ಲೆಡ್ಜಿಂಗ್‌ ಅಂದ್ರೆ ನನಗೂ ಕೂಡ ಇಷ್ಟ. ಮನುಷ್ಯರು ಕ್ರಿಕೆಟ್ ಆಡುತ್ತಾರೆ, ಆದ್ದರಿಂದ ನಿಸ್ಸಂಶಯವಾಗಿ ಭಾವನೆಗಳಿರುತ್ತವೆ. ಹಾಗಾಗಿ ಪಂದ್ಯದಲ್ಲಿ ಕನಿಷ್ಠ ಒಂದೇ ಒಂದು ಸ್ಲೆಡ್ಜ್‌ ಆದರೂ ಇದ್ದೇ ಇರುತ್ತದೆ. ಇಂಥಾ ಘಟನೆಗಳು ನಡೆಯುವುದು ಸಾಮಾನ್ಯ. ಸುಮ್ಮನೆ ಬೌಲ್‌ ಹಾಗೂ ಫೀಲ್ಡ್‌ ಮಾಡಿ ಮರಳಲು ಅವರೇನೂ ರೋಬೊಟ್‌ಗಳಲ್ಲ. ಆದರೆ, ನೀವು ಒತ್ತಡದ ಸನ್ನಿವೇಶವನ್ನು ಹೇಗೆ ನಿಭಾಯಿಸುತ್ತೀರಿ ಹಾಗೂ ಹೇಗೆ ವರ್ತಿಸುತ್ತೀರಿ ಎಂಬುದೇ ಟೆಸ್ಟ್ ಕ್ರಿಕೆಟ್,” ಎಂದು ಗಂಭೀರ್‌ ಸ್ಟಾರ್‌ ಸ್ಪೋರ್ಟ್ಸ್ ಚರ್ಚೆ ವೇಳೆ ಹೇಳಿದರು.

‘ನಿಮ್ಮ ಬೇಜವಾಬ್ದಾರಿಯುತ ಶಾಟ್‌ಗೆ ಕ್ಷಮೆ ಇಲ್ಲ’ ಪಂತ್‌ ವಿರುದ್ಧ ಗವಾಸ್ಕರ್‌ ಕಿಡಿ!

“ಓಡಿಐ ಕ್ರಿಕೆಟ್‌ನಲ್ಲಿ ಇಂಥಾ ಹೊಡೆತಕ್ಕೆ ಕೈ ಹಾಕಿದ್ದರೆ, ಈ ಬಗ್ಗೆ ಯಾರು ಟೀಕೆ ಮಾಡುತ್ತಿರಲಿಲ್ಲ. ಆದರೆ ಟೆಸ್ಟ್‌ ಪಂದ್ಯದ ಇಂಥಾ ಕಠಿಣ ಸನ್ನಿವೆಶದಲ್ಲಿ ಈ ಶಾಟ್‌ ಹೊಡೆಯುವ ಅಗತ್ಯವಿರಲಿಲ್ಲ. ಇಂಥಾ ಸಂದರ್ಭದಲ್ಲಿ ನಾನು ಶೌರ್ಯ ಮತ್ತು ಮೂರ್ಖತನದ ನಡುವೆ ಬಹಳ ತೆಳುವಾದ ಗೆರೆ ಇದೆ ಎಂದು ಭಾವಿಸುತ್ತೇನೆ. ಖಂಡಿತಾ ಇದು ಶೌರ್ಯವಲ್ಲ, ಇದು ಮೂರ್ಖತನ,” ಎಂದು ಪಂತ್‌ ವಿರುದ್ಧ ಗಂಭೀರ್‌ ಕಿಡಿ ಕಾರಿದರು.

“ನೀವು ಇಲ್ಲಿಂದ 25 ರಿಂದ 30 ರನ್‌ ಗಳಿಸಿ, ದಕ್ಷಿಣ ಆಫ್ರಿಕಾ ತಂಡಕ್ಕೆ 230 ರಿಂದ 240 ರನ್‌ ಗುರಿ ನೀಡಿದ್ದರ ಹೊರತಾಗಿಯೂ ಇಂಥಾ ಅನಗತ್ಯ ಹೊಡೆತಕ್ಕೆ ಕೈ ಹಾಕಬಾರದು. ಹೀಗಿರುವಾಗ ಶೂನ್ಯ ಸಂಪಾದನೆಯಲ್ಲಿಯೇ ಇಂಥಾ ಹೊಡೆತಕ್ಕೆ ಕೈ ಹಾಕಿದ್ದು ನಿಮ್ಮ ತಪ್ಪು. ದಕ್ಷಿಣ ಆಫ್ರಿಕಾ ತಂಡವನ್ನು ಏಕೆ ಪಂದ್ಯಕ್ಕೆ ಮರಳುವಂತೆ ಮಾಡುತ್ತೀರಿ? ಜಾಸ್ತಿ ದಿನಗಳಿಂದ ಟೆಸ್ಟ್‌ ಕ್ರಿಕೆಟ್‌ ಆಡುತ್ತಾ ಬಂದಿದ್ದೀರಿ, ಇಂಥಾ ಒತ್ತಡವನ್ನು ಹೇಗೆ ನಿಭಾಯಿಸಬೇಕೆಂದು ನಿಮಗೆ ಗೊತ್ತಿರಬೇಕು,” ಎಂದು ಗಂಭೀರ್ ಯುವ ಆಟಗಾರನಿಗೆ ಬುದ್ದಿ ಹೇಳಿದರು.

ಆತಿಥೇಯರಿಗೆ ಎಲ್ಗರ್‌ ಆಸರೆ : ವಿಕೆಟ್‌ ಕಿತ್ತರಷ್ಟೇ ಭಾರತಕ್ಕೆ ಉಳಿಗಾಲ!

“ರಾಸಿ ವ್ಯಾನ್ ಡೆರ್‌ ಡುಸ್ಸೆನ್‌ ಕಾಟ್‌ ಬಿಹೈಂಡ್‌ ಸಂಬಂಧ ರಿಷಭ್‌ ಪಂತ್‌ ಅವರ ಕಡೆಯಿಂದ ಯಾವುದೇ ತಪ್ಪು ಇರಲಿಲ್ಲ. ಏಕೆಂದರೆ ಇಬ್ಬರು ಅಂಪೈರ್‌ಗಳು ಮೈದಾನದಲ್ಲಿದ್ದಾರೆ. ಇವರಿಗೆ ಏನಾದರೂ ಗೊಂದಲ ಉಂಟಾದರೂ ಮೂರನೇ ಅಂಪೈರ್‌ ಇದ್ದಾರೆ. ಆದರೆ, ಇಂದು(ಬುಧವಾರ) ಏನೆಲ್ಲಾ ನಡೆಯಿತು, ಅದನ್ನು ನಾನು ಇಷ್ಟಪಡುತ್ತೇನೆ. ದಕ್ಷಿಣ ಆಫ್ರಿಕಾ ಎದುರು ಭಾರತ ತೋರಿದ ಪ್ರತಿಕ್ರಿಯೆ ಉತ್ತಮವಾಗಿಯೇ ಇತ್ತು. ಆದರೆ, ರಿಷಭ್‌ ಪಂತ್‌ ಒತ್ತಡವನ್ನು ನಿಭಾಯಿಸಲಾಗದೆ ಅನಗತ್ಯ ಹೊಡೆತಕ್ಕೆ ಕೈ ಹಾಕಿ ವಿಕೆಟ್‌ ಒಪ್ಪಿಸಿದ್ದು ನನಗೆ ಬೇಸರ ಮೂಡಿಸಿತು,” ಎದು ಮಾಜಿ ಆರಂಭಿಕ ತಿಳಿಸಿದ್ದಾರೆ.

ಬುಮ್ರಾಗೆ ಸತತ ಬೌನ್ಸರ್‌ ಎಸೆದು ಕಿರಿಕ್‌ ತೆಗೆದ ಯೆನ್ಸನ್‌: ವಿಡಿಯೋ!



Read more

[wpas_products keywords=”deal of the day gym”]