ಹೈಲೈಟ್ಸ್:
- ಇದು ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್ಡೌನ್!
- ರಾಜ್ಯ ಸರ್ಕಾರದ ವಿರುದ್ಧ ಡಿಕೆಶಿ ಕಿಡಿ
- ವೀಕೆಂಡ್ ಕರ್ಫ್ಯೂ ಹಿಂದೆ ರಾಜಕೀಯ ಉದ್ದೇಶ
ವೀಕೆಂಡ್ ಕರ್ಫ್ಯೂ ಹಾಗೂ ಸಭೆ ಸಮಾರಂಭಗಳಿಗೆ ನಿರ್ಬಂಧದ ಬಗ್ಗೆ ಮಾತನಾಡಿದ ಅವರು, ಬಿಜೆಪಿಗೆ ಜನರ ಪ್ರಾಣ ಅಲ್ಲ, ಅವರಿಗೆ ಪಕ್ಷ ಮುಖ್ಯ. ಮೊದಲ ಅಲೆಯಲ್ಲಿ ಸ್ವಿಮ್ಮಿಂಗ್ ಪೂಲ್ಗೆ ಇಳಿದಿದ್ದರಲ್ಲ ಅವರ ವಿರುದ್ಧ ಕೇಸ್ ದಾಖಲಿಸಲಿ. ಜನಾಶೀರ್ವಾದ ಯಾತ್ರೆ ಮಾಡಿದವರ ಮೇಲೆ ಕೇಸ್ ಹಾಕಲಿ.ಸಿಎಂ ಮದುವೆಯಲ್ಲಿ ಆಗಿಯಾಗಿದ್ದಾರೆ ಅವರ ವಿರುದ್ಧ ಕೇಸ್ ದಾಖಲಿಸಲಿ ಎಂದು ಸವಾಲು ಹಾಕಿದರು.
ಒಂದೇ ದಿನದಲ್ಲಿ ದೇಶದ ಕೋವಿಡ್ ಪ್ರಕರಣ ಶೇ 55ರಷ್ಟು ಹೆಚ್ಚಳ: 58,097 ಮಂದಿಗೆ ಸೋಂಕು
ರೈತರ ಬದುಕಿಗಾಗಿ, ಬೆಂಗಳೂರಿನ ನಾಗರಿಕರಿಗೆ ನೀರಿಗಾಗಿ ಪ್ರಾರ್ಥನೆ ಮಾಡಲಿಕ್ಕೆ ಪಾದಯಾತ್ರೆ ನಡೆಸುತ್ತಿದ್ದೇವೆ. ಕಾವೇರಿ ನೀರು ಬೆಂಗಳೂರು ಜನರಿಗೆ ಸಿಗಬೇಕು ಎಂಬುವುದು ನಮ್ಮ ಆಸೆ ಎಂದರು.
ಅವರಿಗೆ ರಾಜಕಾರಣ ಮಾಡಲು ಟಫ್ ಆಗುತ್ತಿದೆ. ಅದಕ್ಕಾಗಿ ರಾಜಕಾರಣಕ್ಕಾಗಿ ಟಫ್ ರೂಲ್ಸ್ ತಂದಿದ್ದಾರೆ. ಇದು ಕೋವಿಡ್ ಕರ್ಫ್ಯೂ, ಲಾಕ್ ಡೌನ್ ಅಲ್ಲ ಬದಲಾಗಿ ಬಿಜೆಪಿ ಕರ್ಫ್ಯೂ ಬಿಜೆಪಿ ಲಾಕ್ಡೌನ್ ಎಂದು ಲೇವಡಿ ಮಾಡಿದರು.
ರ್ಯಾಲಿ, ಪ್ರತಿಭಟನೆ ಮಾಡಬೇಡಿ ಅಂದಿದ್ದಾರೆ. ನಾವು ರ್ಯಾಲಿ ಮಾಡಲ್ಲ, ಬದಲಾಗಿ ಕುಡಿಯುವ ನೀರಿಗಾಗಿ ನಡೆಯುತ್ತೇವೆ ಎಂದು ತಿಳಿಸಿದರು. ಇನ್ನು ಪಾದಯಾತ್ರೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
Read more
[wpas_products keywords=”deal of the day sale today offer all”]