Karnataka news paper

ಮುಖ್ಯಾಂಶಗಳು: ಕೋವಿಡ್‌ ಹೆಚ್ಚಳ; ವಾರಾಂತ್ಯ ಕರ್ಫ್ಯೂನಲ್ಲಿ ಏನಿರುತ್ತೆ, ಏನಿರಲ್ಲ?


ಬೆಂಗಳೂರು: ಕೋವಿಡ್ ಪ್ರಕರಣಗಳು ಏಕಾಏಕಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಶುಕ್ರವಾರದಿಂದ (ಜ.7) ರಾಜ್ಯದಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ.

ವಾರಾಂತ್ಯ ಕರ್ಫ್ಯೂನಲ್ಲಿ ಏನಿರುತ್ತೆ? ಏನಿರುವುದಿಲ್ಲ? ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 

ಓದಿ: ಕೋವಿಡ್‌: ರಾಜ್ಯದಾದ್ಯಂತ ವಾರಾಂತ್ಯದ ಕರ್ಫ್ಯೂ, ಸಭೆ– ರ‍್ಯಾಲಿಗಳಿಗೆ ನಿರ್ಬಂಧ

ಏನೆಲ್ಲ ಇರುತ್ತೆ…

* ಮೆಡಿಕಲ್ ಸ್ಟೋರ್, ಆಸ್ಪತ್ರೆಗಳು ಕಾರ್ಯನಿರ್ವಹಿಸಲಿವೆ.
*  ದಿನಸಿ ಅಂಗಡಿ, ಹಾಲು, ತರಕಾರಿ, ಔಷಧ, ಪೆಟ್ರೋಲ್ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
* ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆ ಮಾತ್ರ ಇರುತ್ತದೆ
* ಐಟಿ ಹಾಗೂ ಇತರೆ ಉದ್ಯಮ ಸಂಸ್ಥೆಗಳ ಸಿಬ್ಬಂದಿ ಗುರುತಿನ ಚೀಟಿಯೊಂದಿಗೆ ಸಂಚಾರಕ್ಕೆ ಅನುಮತಿ
*ಇ–ಕಾಮರ್ಸ್‌ ಸೇವೆಗೆ ಅವಕಾಶ
* ರೈಲು, ವಿಮಾನ, ಬಸ್‌ ಸಂಚಾರ ಇರಲಿದೆ
* ಪ್ರಯಾಣ ಚೀಟಿ ಇರುವವರು ಆಟೋ, ಟ್ಯಾಕ್ಸಿ ಬಳಸಲು ಅವಕಾಶ

ಏನೆಲ್ಲ ಇರುವುದಿಲ್ಲ…

* ಸಾರ್ವಜನಿಕ ಉದ್ಯಾನಗಳು ಬಂದ್‌
* ಯಾವುದೇ ‍ಪ್ರತಿಭಟನೆ, ಜಾತ್ರೆ, ರ‍್ಯಾಲಿ, ಮೆರವಣಿಗೆಗೆ ಅವಕಾಶ ಇರುವುದಿಲ್ಲ.
* ಶಾಲಾ–ಕಾಲೇಜ್‌ಗಳು ಬಂದ್‌
* ತುರ್ತು ಸೇವೆ ಬಿಟ್ಟು ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ.
* ಅನಗತ್ಯ ಓಡಾಟ, ಸಂಚಾರಕ್ಕೆ ಅವಕಾಶ ಇಲ್ಲ



Read more from source

[wpas_products keywords=”deal of the day sale today kitchen”]