Karnataka news paper

ನಟ ‘ಸಂಚಾರಿ’ ವಿಜಯ್ ಅಭಿನಯಿಸಿದ್ದ ‘ಅಂತ್ಯವಲ್ಲ ಆರಂಭ’ ಶೀಘ್ರದಲ್ಲೇ ರಿಲೀಸ್


ಹೈಲೈಟ್ಸ್‌:

  • ಸಂಚಾರಿ ವಿಜಯ್ ನಟಿಸಿದ್ದ ‘ಅಂತ್ಯವಲ್ಲಆರಂಭ’ ಸಿನಿಮಾ
  • ಈ ಸಿನಿಮಾದಲ್ಲಿ ವಿಜಯ್‌ಗೆ ಶ್ರುತಿ ಹರಿಹರನ್ ನಾಯಕಿ
  • ದಾಂಪತ್ಯದ ಕುರಿತ ಕಥಾಹಂದರ ಹೊಂದಿರುವ ಸಿನಿಮಾ ಇದು

ಸಂಚಾರಿ ವಿಜಯ್‌ ನಟಿಸಿದ್ದ ‘ಅಂತ್ಯವಲ್ಲಆರಂಭ’ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗುತ್ತಿದ್ದು, ಸದ್ಯದಲ್ಲೇ ಇದರ ರಿಲೀಸ್‌ ದಿನಾಂಕ ಅನೌನ್ಸ್‌ ಆಗಲಿದೆ. ಈ ಸಿನಿಮಾವೊಂದು ಸುಂದರ, ಸಾಮಾಜಿಕ, ಕೌಟುಂಬಿಕ, ಸದಭಿರುಚಿಯ ಮತ್ತು ಕುತೂಹಲಕಾರಿಯಾದ ಪ್ರೇಮಕಥೆ ಎಂದಿದ್ದಾರೆ ನಿರ್ದೇಶಕ ನಡಹಳ್ಳಿ ಶ್ರೀಪಾದ ರಾವ್‌ ಮತ್ತು ಡಾ ಎನ್‌.ಜಿ. ಜಯಪ್ರಕಾಶ್‌.

ಈ ಸಿನಿಮಾದಲ್ಲಿ ಸಂಚಾರಿ ವಿಜಯ್‌ ಆಗರ್ಭ ಶ್ರೀಮಂತನ ಪಾತ್ರದಲ್ಲಿಕಾಣಿಸಿಕೊಂಡಿದ್ದು, ಅವರ ಪತ್ನಿಯಾಗಿ ಶ್ರುತಿ ಹರಿಹರನ್‌ ನಟಿಸಿದ್ದಾರೆ. ಇದೇ ರೀತಿ ನಟ ನರಸಿಂಹರಾಜು ಮೊಮ್ಮಗ ವೆಂಕಟರಾಜು, ಶಿಶಿರ, ಹರ್ಷ, ನಚಿಕೇತನ್‌, ದೀಪಕ್‌ ಮತ್ತು ಮಂಗಳೂರಿನ ರಂಗಭೂಮಿ ಪ್ರತಿಭೆಗಳು ಈ ಸಿನಿಮಾದಲ್ಲಿದ್ದಾರೆ. ಇದರ ಶೇ.80ರಷ್ಟು ಚಿತ್ರೀಕರಣ ಸಾಗರ ಮತ್ತು ಬೆಂಗಳೂರು ಸುತ್ತಮುತ್ತ ನಡೆದಿದೆ ಎಂದು ನಿರ್ದೇಶಕದ್ವಯರು ಹೇಳಿದ್ದಾರೆ.

ವಸುಮತಿ ಉಡುಪ ಸಂಭಾಷಣೆ ಮತ್ತು ಸಾಹಿತ್ಯದ ಐದು ಹಾಡುಗಳಿಗೆ ಸುಹಾಸ್‌ ಸಂಗೀತ ಸಂಯೋಜಿಸಿದ್ದು, ಟಿ.ಕೆ. ಜಯರಾಮ್‌ ಕಥೆ ಬರೆದಿದ್ದಾರೆ. ‘ದಂಪತಿ ನಡುವಿನ ಸಂಬಂಧ ಚೆನ್ನಾಗಿರುತ್ತದೆ. ಆದರೆ ಅವರಲ್ಲಿ ಪ್ರೀತಿ ಇರುವುದಿಲ್ಲ. ಮುಂದೆ ಇಬ್ಬರಿಗೂ ತೊಂದರೆ ಶುರುವಾಗುತ್ತದೆ. ಕುಟುಂಬದಲ್ಲಿಎಲ್ಲರಿಗೂ ಇರುವಂತಹ ಜ್ವಲಂತ ಸಮಸ್ಯೆ ಇಬ್ಬರನ್ನು ಕಾಡುತ್ತದೆ. ಕೊನೆಗೆ ಅದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದಕ್ಕೆ ಉತ್ತರವೇ ‘ಅಂತ್ಯವಲ್ಲಆರಂಭ’ ಸಿನಿಮಾ. ಯಾವುದಕ್ಕೂ ಕೊನೆ ಎಂಬುದು ಇರುವುದಿಲ್ಲ. ಬದಲಾಗಿ ಒಂದು ಪ್ರಾರಂಭವಿರುತ್ತದೆ ಎಂಬುದನ್ನು ಇದರ ವಿವಿಧ ಸನ್ನಿವೇಶಗಳ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ’ ಎಂದಿದ್ದಾರೆ ನಿರ್ದೇಶಕರು.

ನಟ ಸಂಚಾರಿ ವಿಜಯ್ ಹೇಳಿದ ಕಥೆಯಲ್ಲಿ ಅಡಗಿತ್ತೊಂದು ಅರಗಿಸಿಕೊಳ್ಳಲಾಗದ ಸತ್ಯ!

ಇನ್ನು, ಇದೇ ತಂಡ ಸಾಲು ಸಾಲು ಸಿನಿಮಾಗಳನ್ನು ಘೋಷಣೆ ಮಾಡಿದೆ. ‘ಬದುಕು ಜಟಕಾ ಬಂಡಿ’, ‘ಹೆಣ್ಣು’, ‘ಮಣ್ಣು’, ‘ನೇತ್ರದಾನ’, ‘ಸಂತಕವಿ ಕನಕದಾಸ’ ಮುಂತಾದ ಸಿನಿಮಾಗಳು ಈ ತಂಡದಿಂದ ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿದ್ದು, ಸದ್ಯ ಅವುಗಳ ಟೈಟಲ್‌ ಬಿಡುಗಡೆಯಾಗಿದೆ. ಈ ತಂಡಕ್ಕೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ, ಡಾ. ಭುಜಂಗ ಶೆಟ್ಟಿ, ಸಾಹಿತಿ ಜೋಗಿ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಶುಭ ಹಾರೈಸಿದರು.

ಪಂಚನಹಳ್ಳಿಯ ವಿಜಯ್ ಎಂಬ ಸಾಮಾನ್ಯ ಹುಡುಗ ‘ರಾಷ್ಟ್ರ ಪ್ರಶಸ್ತಿ’ ಪಡೆಯುವವರೆಗೆ ಸಾಗಿ ಬಂದ ಹಾದಿ



Read more

[wpas_products keywords=”deal of the day party wear dress for women stylish indian”]