Karnataka news paper

ಮೈಸೂರು ದಸರಾಕ್ಕೆ ಯುನೆಸ್ಕೋ ಮಾನ್ಯತೆ: ಪುರಾತತ್ವ ಇಲಾಖೆ ಪ್ರಯತ್ನ


ಹೈಲೈಟ್ಸ್‌:

  • ಜಗದ್ವಿಖ್ಯಾತ ದಸರಾವನ್ನು ಪಾರಂಪರಿಕ ಆಚರಣೆ ಪಟ್ಟಿಗೆ ಸೇರಿಸಲು ಪ್ರಯತ್ನ
  • ದಸರಾ ಮಹೋತ್ಸವಕ್ಕೆ ಯುನೆಸ್ಕೋ ಮಾನ್ಯತೆ ಪಡೆಯಲು ಪ್ರಸ್ತಾವನೆ ಸಲ್ಲಿಕೆ
  • ಕೋಲ್ಕತಾದ ದುರ್ಗಾ ಪೂಜೆಗೆ ಅಮೂರ್ತ ಪರಂಪರೆ ಮಾನ್ಯತೆ ನೀಡಿದ್ದ ಯುನೆಸ್ಕೋ

ನಾಗರಾಜ್‌ ನವೀಮನೆ

ಮೈಸೂರು: ನಾಡಹಬ್ಬ ದಸರಾವನ್ನು ವಿಶ್ವ ಪಾರಂಪರಿಕ ಆಚರಣೆಗಳ ಪಟ್ಟಿಗೆ ಸೇರಿಸಲು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಪ್ರಯತ್ನ ನಡೆಸಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಕರ್ನಾಟಕದ ಹಂಪಿ, ಪಟ್ಟದಕಲ್ಲು, ಪಶ್ಚಿಮ ಘಟ್ಟವನ್ನು ವಿಶ್ವ ಪಾರಂಪರಿಕ ತಾಣವೆಂದು ಯುನೆಸ್ಕೋ ಗುರುತಿಸಿದ್ದು, ಇದೀಗ ಆ ಸಾಲಿಗೆ ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನೂ ಸೇರಿಸಲು ಪ್ರಯತ್ನ ನಡೆಸಲಾಗಿದೆ.

ಇತ್ತೀಚೆಗೆ ಪಶ್ಚಿಮ ಬಂಗಾಳದ ದುರ್ಗಾಪೂಜೆಯನ್ನು ವಿಶ್ವ ಪಾರಂಪರಿಕ ಆಚರಣೆ ಎಂದು ಯುನೆಸ್ಕೋ ಘೋಷಣೆ ಮಾಡಿದೆ. ಇದರಿಂದ ಸ್ಫೂರ್ತಿ ಪಡೆದುಕೊಂಡಿರುವ ಪುರಾತತ್ವ, ಸಂಗ್ರ ಹಾಲಯಗಳು ಮತ್ತು ಪರಂಪರೆ ಇಲಾಖೆ 400 ವರ್ಷಕ್ಕೂ ಹೆಚ್ಚು ಇತಿಹಾಸ ಇರುವ, ತನ್ನ ಪರಂಪರೆ, ಸಂಸ್ಕೃತಿ ಮೂಲಕ ವಿಶ್ವದ ಗಮನ ಸೆಳೆದಿರುವ ದಸರಾ ಮಹೋತ್ಸವನ್ನು ವಿಶ್ವ ಪಾರಂಪರಿಕ ಆಚರಣೆಗಳ ಪಟ್ಟಿಗೆ ಸೇರಿಸಲು ಮುಂದಾಗಿದೆ.
ಕೊಲ್ಕತ್ತಾ ದುರ್ಗಾ ಪೂಜೆಗೆ ಯುನೆಸ್ಕೊ ಪಾರಂಪರಿಕ ಮಾನ್ಯತೆ! ದೇಶದ ಹೆಮ್ಮೆ ಎಂದ ಮೋದಿ
”ಮೈಸೂರು ದಸರಾ ಮಹೋತ್ಸವ ವಿಶ್ವವಿಖ್ಯಾತಿ ಪಡೆದುಕೊಂಡಿದ್ದು, ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ವಿಜಯ ನಗರದಿಂದ ಶುರುವಾದ ದಸರಾ ಪಯಣ ಇದೀಗ ಮೈಸೂರಿಗೆ ಬಂದು ನಿಂತಿದೆ. ಜೀವ ವೈವಿಧ್ಯಮಯವಾದ ಪರಂಪರೆ ಇದು. ದೈವದ ಭಕ್ತಿ, ಜಾನಪದ, ಇತಿಹಾಸ, ಕಲೆ, ವಾಸ್ತುಶಿಲ್ಪ ಎಲ್ಲವೂ ದಸರಾದೊಂದಿಗೆ ಮಿಳಿತಗೊಂಡಿದೆ. ನಾಡಹಬ್ಬವಾಗಿ ಇದೀಗ ಆಚರಣೆ ಮಾಡುತ್ತಿದ್ದೇವೆ. ಪರಂಪರೆಯನ್ನು ಬಿಟ್ಟುಕೊಟ್ಟಿಲ್ಲ. ಈ ನಿಟ್ಟಿನಲ್ಲಿ ದಸರಾ ಮಹೋತ್ಸವವನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಪ್ರಯತ್ನ ನಡೆದಿದೆ,” ಎಂದು ಪುರಾತತ್ವ , ಸಂಗ್ರ ಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತರಾದ ಬಿ.ಆರ್‌. ಪೂರ್ಣಿಮಾ ತಿಳಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಯುನೆಸ್ಕೋ (UNESCO) ಕೋಲ್ಕತಾದ ದುರ್ಗಾಪೂಜೆಯನ್ನು ‘ಅಮೂರ್ತ ಪರಂಪರೆಗಳ ಪಟ್ಟಿ’ಯಲ್ಲಿ ಸೇರಿಸಿತ್ತು. ಭಾರತದ ರಾಮಲೀಲಾ, ನೌರೋಜ್, ಯೋಗ, ಕುಂಭಮೇಳ ಆಚರಣೆಗಳು ಕೂಡ ಈ ಪಟ್ಟಿಯಲ್ಲಿವೆ. ಆದರೆ ನೂರಾರು ವರ್ಷಗಳಿಂದ ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತಿರುವ ಮೈಸೂರು ಇನ್ನೂ ಈ ಪಟ್ಟಿಗೆ ಸೇರ್ಪಡೆಯಾಗಿಲ್ಲ.



Read more

[wpas_products keywords=”deal of the day sale today offer all”]