Karnataka news paper

ಸಚಿವ ಅಶ್ವಥ್‌ನಾರಾಯಣ್‌ ಮೇಕೆದಾಟು ಯೋಜನೆಗೆ ಅನುಮತಿ ಪಡೆದು ತೋರಿಸಲಿ: ಕೆಪಿಸಿಸಿ ವಕ್ತಾರ ಸವಾಲು


ಬೆಂಗಳೂರು: ಸಚಿವ ಅಶ್ವಥ್‌ನಾರಾಯಣ್‌ ತಮ್ಮ ಪಕ್ಷದ 26 ಸಂಸದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೇಕೆದಾಟು ಯೋಜನೆಗೆ ಅನುಮತಿ ತಂದು ತಮ್ಮ ಗಂಡಸುತನ ಸಾಬೀತುಪಡಿಸಲಿ ಎಂದು ಕೆಪಿಸಿಸಿ ವಕ್ತಾರ ಕೆಂಗಲ್‌ ಶ್ರೀಪಾದ ರೇಣು ಸವಾಲ್‌ ಹಾಕಿದ್ದಾರೆ.

ರಾಮನಗರದಲ್ಲಿ ಜ.3ರಂದು ಆಯೋಜಿಸಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣರವರು ತಾವು ಸಚಿವರೂ ಎಂಬುದನ್ನು ಮರೆತು ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಲ್ಲದೇ, ಸಂಸದರಾದ ಡಿ.ಕೆ.ಸುರೇಶ್ ಮೇಲೆ ಹಲ್ಲೆ ಮಾಡಲೂ ಪ್ರಯತ್ನಿಸಿ ತಮ್ಮ ಹೀನ ಸಂಸ್ಕೃತಿಯನ್ನು ತೋರಿಸಿದ್ದಾರೆ. ಇದರ ಮೂಲಕ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಅವಮಾನ ಮಾಡಿದ್ದಾರೆ. ಜತೆಗೆ ಸರಕಾರ ಘನತೆಗೂ ಚ್ಯುತಿ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಶ್ವತ್ಥನಾರಾಯಣ ದುರ್ವರ್ತನೆ ವಿರುದ್ಧ ಮಲ್ಲೇಶ್ವರಂನ ಕಾಂಗ್ರೆಸ್ ಮುಖಂಡ ಶ್ರೀಪಾದ ರೇಣು ನೇತೃತ್ವದಲ್ಲಿ ಮಂಗಳವಾರ ಬೆಂಗಳೂರಿನ ಮಲ್ಲೇಶ್ವರಂನ ಕುವೆಂಪು ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ವೇದಿಕೆ ಮೇಲೆ ಡಿಕೆ ಸುರೇಶ್ ಹಾಗೂ ಅಶ್ವತ್ಥನಾರಾಯಣ ನಡುವೆ ಜಟಾಪಟಿ!

ಈ ವೇಳೆ ಮಾತನಾಡಿದ ಮಲ್ಲೇಶ್ವರಂನ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ವಕ್ತಾರ ಶ್ರೀಪಾದ ರೇಣು, ಸಿದ್ದರಾಮಯ್ಯ ಕಾಲದಲ್ಲಿ ಮೇಕೆದಾಟು ಯೋಜನೆಯನ್ನು ಮಾಡಿಸಿ, ಡಿಪಿಆರ್ ಕೂಡ ಮಾಡಿಸಲಾಯಿತು. ಈ ಯೋಜನೆ ಕುರಿತು ಜ.9ರಂದು ನಾವು ಪಾದಯಾತ್ರೆಯನ್ನು ಮಾಡಲು ಹೊರಟಿದ್ದೇವೆ. ಇದನ್ನು ಸಹಿಸದೆ ಅಶ್ವತ್ಥನಾರಾಯಣ ರಾಮನಗರದಲ್ಲಿ ಪ್ಲಾನ್ ಮಾಡಿಯೇ ಸಮಸ್ಯೆಯನ್ನು ಹುಟ್ಟುಹಾಕಿದ್ದಾರೆ. ಕಾಂಗ್ರೆಸ್ ಗೆ ಹೆಸರು ಬಂದುಬಿಡುತ್ತದೆ ಎಂಬ ದುರಾಲೋಚನೆಯಿಂದ ಅಶ್ವತ್ಥನಾರಾಯಣ ಅವರು ಈ ರೀತಿ ಕುತಂತ್ರ ಬುದ್ಧಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಮೇಕೆದಾಟು ಯೋಜನೆ ಚಾಲನೆಗೆ ಬಿಜೆಪಿ ಸರಕಾರ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಡುವುದಷ್ಟೇ ಬಾಕಿಯಿದೆ. ಅದು ಸಿಕ್ಕ ನಂತರ ಅಣೆಕಟ್ಟೆ ನಿರ್ಮಿಸಿದರೆ ಬೆಂಗಳೂರಿಗೆ 6 ಟಿಎಂಸಿಯಷ್ಟು ಕುಡಿಯುವ ನೀರು ಬರುತ್ತದೆ. ಇದರಿಂದ ಮುಂದೆ ಬೆಂಗಳೂರಿನಲ್ಲಿ ಎದರಾಗುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದರೆ ಇದಕ್ಕೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಡ್ಡಿ ಪಡಿಸುತ್ತಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರು ಕೂಡ ಇದಕ್ಕೆ ಪರೋಕ್ಷವಾಗಿ ಅಡ್ಡಿಯಾಗಿದ್ದಾರೆ. ಬಿಜೆಪಿ ಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರು, ಮೇಕೆದಾಟು ಯೋಜನೆಗೆ ಅನುಮತಿ ಪಡೆಯುವ ಧೈರ್ಯ ಮಾಡಲಿ. ಆ ಧೈರ್ಯವನ್ನು ಪ್ರದರ್ಶಿಸುವ ಮೂಲಕ ತಮ್ಮ ಗಂಡಸುತನ ಸಾಬೀತುಪಡಿಸಲಿ ಎಂದು ಸವಾಲ್‌ ಹಾಕಿದರು.

ಉನ್ನತ ಶಿಕ್ಷಣ ಸಚಿವರು ಜಿಲ್ಲೆಗೆ ಏನೂ ಮಾಡಿಲ್ಲ, ರಾಜಕೀಯದಲ್ಲಿ ಫುಲ್‌ ಬ್ಯುಸಿ: ಡಿಕೆ ಸುರೇಶ್‌ ವ್ಯಂಗ್ಯ

ಮಲ್ಲೇಶ್ವರ ಎಷ್ಟು ಹದಗೆಟ್ಟಿದೆ‌‌ ಎನ್ನಲು ಇಲ್ಲಿನ ರಸ್ತೆಗಳೇ ನಿದರ್ಶನ. ಮೂಲ ಸೌಲಭ್ಯಗಳಿಲ್ಲದೆ ಜನ ಸಮಸ್ಯೆಗೆ ಸಿಲುಕಿದ್ದಾರೆ. ಅಂತಹ ಸಮಸ್ಯೆಗಳನ್ನು ಇಟ್ಟುಕೊಂಡು ಅಶ್ವತ್ಥನಾರಾಯಣ ಅವರು ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ಬಿಟ್ಟು, ರಾಮನಗರವನ್ನು ಅಭಿವೃದ್ಧಿ ಮಾಡಲು ಹೊರಟಿದ್ದಾರಲ್ಲ ಇದು ಯಾವ ನ್ಯಾಯ ಸ್ವಾಮಿ? ಮೊದಲು ಭ್ರಷ್ಟಾಚಾರವನ್ನು ಕಡಿಮೆ ಮಾಡಿಕೊಂಡು ತಮ್ಮ ಕ್ಷೇತ್ರದ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಲಿ. ನಂತರ ಬೇರೆಯವರೆ ಕ್ಷೇತ್ರಕ್ಕೆ ಹೋಗಲಿ ಎಂದು ಕಾಂಗ್ರೆಸ್‌ನ ಶ್ರೀಪಾದ ರೇಣು ಸಲಹೆ ನೀಡಿದರು.



Read more

[wpas_products keywords=”deal of the day sale today offer all”]