ವೇದಿಕೆ ಮೇಲೆ ಡಿಕೆ ಸುರೇಶ್ ಹಾಗೂ ಅಶ್ವತ್ಥನಾರಾಯಣ ನಡುವೆ ಜಟಾಪಟಿ!
ತಾಂತ್ರಿಕ ಸಂಸ್ಥೆಯಾದ ಜಿಟಿಟಿಸಿಯಲ್ಲಿ ಆರು ತಿಂಗಳು ತರಬೇತಿ ಪಡೆದಿದ್ದೆ. ಹೀಗಾಗಿ ಟಾಟಾ ಮೋಟರ್ಸ್ ನಲ್ಲಿ ನನಗೆ ಕೆಲಸ ಸಿಕಿತ್ತು. ನನ್ನ ಬದುಕಿನ ಯಶಸ್ಸಿನ ಮೆಟ್ಟಿಲಿನಲ್ಲಿ ಜಿಟಿಟಿಸಿ ಪ್ರಮುಖ ಪಾತ್ರ ವಹಿಸಿತ್ತು ಎಂದು ಈ ವೇಳೆ ಸ್ಮರಿಸಿಕೊಂಡರು.
ಉದ್ಯೋಗ ನೀಡಲು ಪ್ರತಿ ತಾಲೂಕಿನಲ್ಲೂ ಕಾರ್ಯಕ್ರಮ ರೂಪಿಸಲಾಗುವುದು. ಜಲಜೀವನ್ ಮೂಲಕ ಪ್ರತಿ ಮನೆಗೂ ನೀರು ನೀಡಲಾಗುವುದು. ಅತೀ ದೊಡ್ಡ ದೇಶಕ್ಕೆ ನೀರು, ವಿದ್ಯುತ್ , ಆಶ್ರಯ ನೀಡುವ ಮಹತ್ವದ ಯೋಜನೆಗಳು ನಮ್ಮ ಸರಕಾರದಲ್ಲಿವೆ. ಅಸಾಧ್ಯವಾದದನ್ನು ಸಾಧ್ಯ ಮಾಡಲು ನಮ್ಮ ಪ್ರಧಾನಿಗಷ್ಟೆ ಸಾಧ್ಯ. ಸವಾಲುಗಳು ನಮ್ಮ ಯೋಜನೆಗಳನ್ನು ಎಂದಿಗೂ ನಿಲ್ಲಿಸುವುದಿಲ್ಲ. ಸವಾಲಿರುವ ಯೋಜನೆಗಳನ್ನು ನಾವು ದಾಟುತ್ತಿದ್ದೆವೆ. ಹೀಗಾಗಿ ಈ ಭಾಗದ ಎಲ್ಲ ಯೋಜನೆಗಳಿಗು ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.
ನೀರಾವರಿ ಯೋಜನೆಗೆ ಸರ್ವ ರೀತಿ ತಯಾರಿಗಳನ್ನು ನಡೆಸಬೇಕು. ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಉದ್ಯೋಗ ನೀತಿಯನ್ನು ಸಹ ನಮ್ಮ ಸರಕಾರ ತರಲಿದೆ. ತಲಾದಯದಲ್ಲಿ4 ರಷ್ಟಿದ್ದೆವೆ. ಆದರೆ, ಇದರಲ್ಲಿ ಶೇ.30 ರಷ್ಟು ಮಂದಿ ಮಾತ್ರವೇ ಇದರಲ್ಲಿ ಭಾಗಿಯಾಗಿದ್ದಾರೆ.
ಹೊರಗುಳಿದವವರು ಸಹ ಭಾಗಿಯಾಗಬೇಕು. ತಲಾದಯ ಹೆಚ್ಚಳ, ಜಿಡಿಪಿ ಹೆಚ್ಚಳಕ್ಕಾಗಿ ಮುಂದಿನ ಬಜೆಟ್ ನಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಏನೆಲ್ಲವು ಸಾಧ್ಯವಿದೆಯೋ ಅದನ್ನು ಮಾಡುತ್ತೇನೆ. ನಿಮ್ಮ ಜತೆ ನಾನಿದ್ಧನೆ ಮಂಜಣ್ಣ ಎಂದು ಶಾಸಕರಿಗೆ ಅಭಯ ನೀಡಿದರು. ನಾನು ಜನ ಉಪಯೋಗಿ ಶಾಸಕನಾಗಿ ಕೆಲಸ ಮಾಡುತ್ತೆನೆ. ವೀರಾಪುರ, ಬಾನಂದೂರು ಗ್ರಾಮಗಳ ಅಭಿವೃದ್ಧಿಗೆ ನಮ್ಮ ಸರಕಾರ ಬದ್ದವಾಗಿದೆ ಎಂದು ಹೇಳಿದರು.
ಕಡೆಗಣನೆ ಖಂಡಿಸಿ ರಾಮನಗರದಲ್ಲಿ ಸಿಎಂಗೆ ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟಿಸಿದ ದಲಿತ ಮುಖಂಡರು
ಮನೆಯಲ್ಲಿ ಗದೆ ಹಾಗೂ ಕತ್ತಿ ಇರಬೇಕು. ಗದೆ ಕೊಟ್ಟರೆ ಅಂಜನೇಯ ಸ್ವಾಮಿಗೆ ಕೊಡುತ್ತೇನೆ. ಕತ್ತಿಯನ್ನು ದೇವಿಗೆ ಕೊಡುತ್ತೇನೆ. ಹೀಗಾಗಿ ಮಾಗಡಿ ಶಾಸಕರು ನನಗೆ ಸನ್ಮಾನದ ನೆಪದಲ್ಲಿ ನೀಡಿರುವ ಗದೆಯನ್ನು ಇದೇ ಊರಿನ ಆಂಜನೇಯ ದೇವಾಲಯಕ್ಕೆ ಕೊಡುತ್ತಿದ್ದೆನೆ ಎಂದು ಹೇಳಿದರು.