ವಿಜಯಪುರದಲ್ಲಿ ಸರ್ಕಾರಿ ಶಾಲೆಯಲ್ಲಿದ್ದ ಬಿಸಿಯೂಟದ ಆಹಾರ ಧಾನ್ಯ ಕಳ್ಳರ ಪಾಲು..!
ಆದರೆ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆದಿದೆ ಎಂದು ಜಲನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ದಾಳಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಸಿದ್ರಾಮ ಮಾರಿಹಾಳ, ಜಲನಗರ ಪಿಎಸ್ ಐ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಈ ಕುರಿತು ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳು ನೀಡಿದ ದೂರಿನನ್ವಯ ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಚಗೇರಿ-ಗೋಕಾಕ ಬಸ್ ಪುನರಾರಂಭಿಸಲು ಮನವಿ
ಹೊರ್ತಿ: ಇಂಚಗೇರಿ-ಹೊರ್ತಿ-ಗೋಕಾಕ ಬಸ್ ಪುನರಾರಂಭಿಸಬೇಕು ಮತ್ತು ಬಳ್ಳಾರಿ-ವಿಜಯಪುರ-ಸೋಲ್ಲಾಪುರ ಬಸ್ ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಗ್ರಾಪಂ ಸದಸ್ಯ ಶರಣಬಸು ಡೊಣಗಿ ಅವರ ನೇತೃತ್ವದಲ್ಲಿಗ್ರಾಮಸ್ಥರು ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎ.ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಇಂಚಗೇರಿಯಿಂದ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊರಡುವ ಬಸ್ ಹೊರ್ತಿ ಮಾರ್ಗವಾಗಿ ಗೋಕಾಕಗೆ ಹೋಗಲಿದೆ. ಇದು ಮತ್ತೆ ಆರಂಭವಾದರೆ ಶಾಲೆ, ಕಾಲೇಜ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದರ ಜತೆಗೆ ಬಳ್ಳಾರಿ -ಸೋಲ್ಲಾಪುರ ಬಸ್ ಕೂಡ ನಿಲುಗಡೆಯಾದರೆ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ. ಅವರು ಬೇಗ ಶಾಲೆ-ಕಾಲೇಜ್ ತಲುಪಿ ನಿತ್ಯವೂ ಪಾಠದಿಂದ ವಂಚಿತವಾಗುವುದು ತಪ್ಪುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.
Karnataka School Midday Meal: ‘ನಮಗೂ ಮೊಟ್ಟೆ ಕೊಡಲ್ವಾ ಸಾರ್?’; ಹೈಸ್ಕೂಲ್ ಮಕ್ಕಳ ಈ ಬೇಡಿಕೆ ಮೊಟ್ಟೆ ವಿರೋಧಿಗಳಿಗೆ ಕೇಳುವುದೇ?
ಮನವಿಗೆ ಸ್ಪಂದಿಸಿದ ಡಿಟಿಒ ಬಿರಾದಾರ ಅವರು, ಇಂಚಗೇರಿ-ಗೋಕಾಕ ಬಸ್ ಪುನಃ ಪ್ರಾರಂಭಿಸಲು ಮತ್ತು ಬಳ್ಳಾರಿ-ಸೋಲ್ಲಾಪುರ ಬಸ್ ನಿಲುಗಡೆಗೆ ಅಲ್ಲಿನ ಡಿಟಿಒಗಳ ಜತೆಗೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.