Karnataka news paper

ಈಡೇರಿದ ಕನವರಿಕೆ: ‘ಕನ್ನಡತಿ’ ವೀಕ್ಷಕರಿಗೆ ಖುಷಿಯೋ ಖುಷಿ..!


ಹೈಲೈಟ್ಸ್‌:

  • ‘ಕನ್ನಡತಿ’ ಧಾರಾವಾಹಿಗೆ ಹೊಸ ಟೈಟಲ್ ಕಾರ್ಡ್
  • ಹೊಸ ಟೈಟಲ್ ಕಾರ್ಡ್ ಕಂಡು ಸಂತಸಗೊಂಡ ವೀಕ್ಷಕರು
  • ಹೊಸ ಟೈಟಲ್ ಕಾರ್ಡ್‌ನಲ್ಲಿ ಹರ್ಷ-ಭುವಿ ಪ್ರೀತಿಗೆ ಪ್ರಾಮುಖ್ಯತೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಕನ್ನಡತಿ’ ಕೂಡ ಒಂದು. ವಿಭಿನ್ನ ಕಥಾಹಂದರ ಹೊಂದಿರುವ ‘ಕನ್ನಡತಿ’ ಧಾರಾವಾಹಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇಲ್ಲಿಯವರೆಗೂ ‘ಕನ್ನಡತಿ’ ಧಾರಾವಾಹಿಯ ವೀಕ್ಷಕರಿಗೆ ಒಂದು ಆಸೆ ಇತ್ತು. ಆ ಆಸೆ ಇದೀಗ ಈಡೇರಿದೆ.

ವೀಕ್ಷಕರಿಗಿದ್ದ ಆಸೆ ಏನು?
‘ಕನ್ನಡತಿ’ ಧಾರಾವಾಹಿಯ ಟೈಟಲ್ ಕಾರ್ಡ್ ಚೇಂಜ್ ಆಗಬೇಕು ಎಂಬ ಕನವರಿಕೆ ವೀಕ್ಷಕರಿಗಿತ್ತು. ಆ ಕನವರಿಕೆಗೆ ಇದೀಗ ‘ಕನ್ನಡತಿ’ ಧಾರಾವಾಹಿ ತಂಡ ಅಸ್ತು ಎಂದಿದೆ. ‘ಕನ್ನಡತಿ’ ಧಾರಾವಾಹಿಯ ಟೈಟಲ್ ಕಾರ್ಡ್ ಬದಲಾವಣೆ ಆಗಿದೆ. ಹೊಸ ಟೈಟಲ್ ಕಾರ್ಡ್ ಕಂಡು ‘ಕನ್ನಡತಿ’ ವೀಕ್ಷಕರು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ.

ಕನ್ನಡತಿ: ಭುವಿಯೇ ಸೌಪರ್ಣಿಕ ಅನ್ನೋ ಸತ್ಯ ಸಾನಿಯಾಗೆ ಗೊತ್ತಾಗೋಯ್ತಾ?
ಹೊಸ ಟೈಟಲ್ ಕಾರ್ಡ್‌ನಲ್ಲಿ ಏನಿದೆ?
‘ಕನ್ನಡತಿ’ ಧಾರಾವಾಹಿಯ ಹೊಸ ಟೈಟಲ್ ಕಾರ್ಡ್‌ನಲ್ಲಿ ಭುವಿ (ಭುವನೇಶ್ವರಿ/ ಸೌಪರ್ಣಿಕ) ತೊಡೆ ಮೇಲೆ ಹರ್ಷ ಮಲಗಿರುವುದು ಹಾಗೂ ಸ್ವಲ್ಪ ಮುಂದೆ ವರೂಧಿನಿ ನಿಂತಿರುವುದನ್ನು ಚಿತ್ರೀಕರಿಸಲಾಗಿದೆ. ಟೈಟಲ್ ಕಾರ್ಡ್‌ನಲ್ಲಿ ಹರ್ಷ ಹಾಗೂ ಭುವಿಯನ್ನು ಒಂದು ಮಾಡಿ.. ವರೂಧಿನಿಯನ್ನು ಕೊಂಚ ದೂರ ನಿಲ್ಲಿಸಿರುವುದರಿಂದ.. ಇನ್ನು ಮುಂದಿನ ಧಾರಾವಾಹಿಯ ಕಥೆ ಇದೇ ಧಾಟಿಯಲ್ಲಿ ಸಾಗಬಹುದು ಎಂಬ ಕಾರಣಕ್ಕೆ ವೀಕ್ಷಕರು ಸಂತಸಗೊಂಡಿದ್ದಾರೆ.

ಮನಸ್ಸಿನಲ್ಲಿ ಬಚ್ಚಿಟ್ಟಿದ್ದ ಮಾತನ್ನು ಹರ್ಷನ ಮುಂದೆ ಹೇಳಿಬಿಟ್ರಾ ಭುವಿ? ವೀಕ್ಷಕರ ಕನವರಿಕೆ ಒಂದೇ..!
ಹರ್ಷ-ಭುವಿ ಒಂದಾಗ್ಬೇಕು ಅನ್ನೋದು ವೀಕ್ಷಕರ ಆಸೆ. ಹರ್ಷ-ಭುವಿ ಯಾವಾಗ ಒಂದಾಗುತ್ತಾರೋ ಅಂತ ವೀಕ್ಷಕರು ಕಾತರದಿಂದ ಕಾಯುತ್ತಿದ್ದರು. ಹರ್ಷನ ಪ್ರೀತಿಯನ್ನು ಭುವಿ ಒಪ್ಪಿಕೊಳ್ತಾರೋ, ಇಲ್ವೋ… ವರೂಧಿನಿಗಾಗಿ ತನ್ನ ಪ್ರೀತಿಯನ್ನ ಭುವಿ ತ್ಯಾಗ ಮಾಡಬಹುದಾ ಅಂತೆಲ್ಲಾ ವೀಕ್ಷಕರು ಯೋಚಿಸುತ್ತಿದ್ದರು. ಆದರೆ, ‘ಕನ್ನಡತಿ’ ಧಾರಾವಾಹಿಯಲ್ಲಿ ಇದೀಗ ಟ್ವಿಸ್ಟ್ ಸಿಕ್ಕಿದ್ದು, ತಮ್ಮ ಮನಸ್ಸಿನ ಮಾತನ್ನೆಲ್ಲಾ ಭುವಿ ಹೊರಗೆ ಹಾಕಿದ್ದಾರೆ. ಹರ್ಷನ ಪ್ರೀತಿಯನ್ನು ಒಪ್ಪಿಕೊಂಡು ಸ್ವೀಕರಿಸಿದ್ದಾರೆ ‘ಹಸಿರುಪೇಟೆ ಟೀಚರ್’ ಭುವನೇಶ್ವರಿ. ಹೀಗಾಗಿ, ಟೈಟಲ್ ಕಾರ್ಡ್‌ನಲ್ಲಿ ಹರ್ಷ ಮತ್ತು ಭುವಿಯನ್ನು ಕಪಲ್ ಆಗಿ, ವರೂಧಿನಿಯನ್ನು ಒಂಟಿಯಾಗಿ ತೋರಿಸಲಾಗಿದೆ.

ರೌಡಿಗಳ ಅಟ್ಟಹಾಸ: ಅಪಾಯದಲ್ಲಿರುವ ಹರ್ಷನ ಪ್ರಾಣ ಕಾಪಾಡುತ್ತಾಳಾ ಭುವಿ?
ಹಳೇ ಟೈಟಲ್ ಕಾರ್ಡ್‌ನಲ್ಲಿ ಏನಿತ್ತು?
‘ಕನ್ನಡತಿ’ ಧಾರಾವಾಹಿಯ ಮೊದಲ ಟೈಟಲ್ ಕಾರ್ಡ್‌ನಲ್ಲಿ… ಹರ್ಷನನ್ನು ಭುವಿ ಕರೆಯುವುದು, ವರೂಧಿನಿಯ ಬೆನ್ನಿಗೆ ಹರ್ಷ ಒರಗುವುದನ್ನು ಚಿತ್ರೀಕರಿಸಲಾಗಿತ್ತು. ಇದನ್ನ ನೋಡಿದ್ದ ವೀಕ್ಷಕರಿಗೆ ‘ಕನ್ನಡತಿ’ ತ್ರಿಕೋನ ಪ್ರೇಮಕಥೆ ಎಂದೇ ಭಾಸವಾಗಿತ್ತು. ವರೂಧಿನಿಗಾಗಿ ಭುವಿ ತನ್ನ ಪ್ರೀತಿಯನ್ನು ತ್ಯಾಗ ಮಾಡಬಹುದು ಎಂದು ವೀಕ್ಷಕರು ಊಹಿಸಿದ್ದರು. ಇದೀಗ ಟೈಟಲ್ ಕಾರ್ಡ್ ಬದಲಾಗಿದ್ದು, ಹೊಸ ಟೈಟಲ್ ಕಾರ್ಡ್‌ನಲ್ಲಿ ಹರ್ಷ ಹಾಗೂ ಭುವಿಯ ಪ್ರೀತಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಹೀಗಾಗಿ, ‘ಕನ್ನಡತಿ’ ವೀಕ್ಷಕರು ಹರ್ಷಿತರಾಗಿದ್ದಾರೆ.

ಬೈಕ್‌ನಲ್ಲಿ ಹರ್ಷನ ಜೊತೆ ಹೊರಟ ಭುವಿ: ‘ಕನ್ನಡತಿ’ ಕಥಾ ಹಾದಿಯಲ್ಲಿ ಸಿಗುತ್ತಾ ದೊಡ್ಡ ತಿರುವು?
ಇಲ್ಲಿಯವರೆಗಿನ ‘ಕನ್ನಡತಿ’
ತನ್ನ ಮನಸ್ಸಿನಲ್ಲಿದ್ದ ಪ್ರೀತಿಯನ್ನು ಭುವಿ ಮುಂದೆ ಮಂಡಿಯೂರಿ ಹರ್ಷ ನಿವೇದನೆ ಮಾಡಿಕೊಂಡಿದ್ದರು. ತಕ್ಷಣ ಏನೂ ಪ್ರತಿಕ್ರಿಯೆ ನೀಡದ ಭುವಿ, ಹರ್ಷನನ್ನು ಸ್ನೇಹಿತನಾಗಿಯೇ ನೋಡಲು ನಿರ್ಧರಿಸಿದ್ದರು. ಆದರೆ, ರಾಣಿಗಢದಲ್ಲಿ ಹರ್ಷನಿಗೆ ಉಂಟಾದ ಅಪಾಯದಿಂದ ಆತಂಕದಲ್ಲಿ ಭುವಿ ತನ್ನ ಮನಸ್ಸಿನ ಮಾತುಗಳನ್ನೆಲ್ಲಾ ಹೊರಹಾಕಿಬಿಟ್ಟರು. ಅಲ್ಲಿಗೆ, ಹರ್ಷನ ಪ್ರೀತಿಯನ್ನು ಭುವಿ ಒಪ್ಪಿಕೊಂಡಂಗಾಯ್ತು. ಅತ್ತ ಭುವಿಯೇ ಸೌಪರ್ಣಿಕ ಎಂಬ ಸತ್ಯ ಕೂಡ ಸಾನಿಯಾಗೆ ಗೊತ್ತಾಗಿದೆ. ಮನೆಗೆ ಮೂರನೇ ಸೊಸೆಯಾಗಿ ಬರುವುದು ಭುವಿಯೇ ಎಂಬುದನ್ನು ತಿಳಿದ ಸಾನಿಯಾ ಮುಂದೆ ಏನೇನು ಮಾಡಬಹುದು? ಹರ್ಷ-ಭುವಿ ಮದುವೆ ನಿರಾತಂಕವಾಗಿ ನಡೆಯುತ್ತಾ ಎಂಬುದೇ ಸದ್ಯದ ಕುತೂಹಲ.

ಅಂದ್ಹಾಗೆ, ‘ಕನ್ನಡತಿ’ ಧಾರಾವಾಹಿಯಲ್ಲಿ ಭುವನೇಶ್ವರಿ ಆಗಿ ರಂಜನಿ ರಾಘವನ್, ಹರ್ಷ ಆಗಿ ಕಿರಣ್ ರಾಜ್, ವರೂಧಿನಿಯಾಗಿ ಸಾರಾ ಅಣ್ಣಯ್ಯ ಅಭಿನಯಿಸುತ್ತಿದ್ದಾರೆ.



Read more