ಬೆಂಗಳೂರಿನಲ್ಲಿ ಫೈನಾನ್ಶಿಯರ್ ಕೊಲೆಗೈದು ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಶೀಟರ್ ಕಾಲಿಗೆ ಗುಂಡೇಟು..!
ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೇ ಐಸಿಯು ವಾರ್ಡ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆರೋಪಿ ಇಮ್ತಿಯಾಜ್, ವೃದ್ಧೆ ಲಕ್ಷ್ಮಮ್ಮ ಅವರಿಗೆ ಗೊತ್ತಾಗದಂತೆ 70 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದರು.
ವೃದ್ಧೆಯ ಪುತ್ರ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ತಾಯಿ ಲಕ್ಷ್ಮಮ್ಮ ಅವರ ಕೊರಳಿನಲ್ಲಿ ಮಾಂಗಲ್ಯ ಸರ ಇಲ್ಲದಿರುವುದನ್ನು ಗಮನಿಸಿ, ಆಸ್ಪತ್ರೆ ಸಿಬ್ಬಂದಿ ಬಳಿ ವಿಚಾರಿಸಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿಯು ಸೂಕ್ತ ರೀತಿಯಲ್ಲಿ ಸ್ಪಂದಿಸದ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಮ್ತಿಯಾಜ್ನನ್ನು ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿರುವುದನ್ನು ಬಾಯಿ ಬಿಟ್ಟಿದ್ದಾನೆ.
ಕಾರಿನಲ್ಲಿ ತೆರಳುತ್ತಿದ್ದ ಬೆಂಗಳೂರಿನ ಮಹಿಳೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಪುಂಡರು : ದೂರು ದಾಖಲು
ಮನೆಗಳ ಬಳಿ ಬಾರದ ಕಸ ಸಂಗ್ರಹಣೆ ವಾಹನಗಳು: ಎಲ್ಲೆಂದರಲ್ಲಿ ಕಸದ ರಾಶಿ
ಯಲಚೇನಹಳ್ಳಿ ವಾರ್ಡ್ನ ಕನಕ ನಗರ, ಸ್ಫೂರ್ತಿ ನಗರ, ಚಂದ್ರನಗರ, ಇಲಿಯಾಸ್ ನಗರ ಸುತ್ತಮುತ್ತಲಿನ ಬಡಾವಣೆಯ ನಾಗರಿಕರು ರೋಗ-ರುಜಿನ ಹರುಡುವ ಭೀತಿಯಿಂದ ಕಾಲ ಕಳೆಯುವಂತಾಗಿದೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಲಚೇನಹಳ್ಳಿ ವಾರ್ಡ್ ವ್ಯಾಪ್ತಿಯ ಪ್ರತಿಯೊಂದು ರಸ್ತೆಗಳು ಕಸದ ರಾಶಿಯಿಂದ ಆವೃತ್ತವಾಗಿವೆ. ಕಸ ವಿಲೇವಾರಿ ಮಾಡದ ಕಾರಣ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಸೊಳ್ಳೆ, ನೊಣಗಳ ಕಾಟದಿಂದ ಸ್ಥಳೀಯರು ಬೇಸತ್ತಿದ್ದು, ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಯಲಚೇನಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿದಿನನಿತ್ಯ ಕಸ ಸಂಗ್ರಹಣೆ ಮಾಡಲು 23 ಆಟೊ, 3 ಟಿಪ್ಪರ್ ಲಾರಿಗಳಿದ್ದರೂ, ಕಸ ಸಂಗ್ರಹಿಸಲು ವಾಹನಗಳೇ ಮನೆಯ ಮುಂದೆ ಬರುವುದಿಲ್ಲಎಂಬುದು ಜನರ ವಾದ. ಆದರೆ ನಾಗರಿಕರು ಕಸವನ್ನು ಬೇರ್ಪಡಿಸಿ, ಕಸ ಸಂಗ್ರಹಿಸುವ ಆಟೊಗಳಿಗೆ ನೀಡದೆ, ಬೀದಿಯಲ್ಲಿ ತಂದು ಸುರಿಯುತ್ತಿದ್ದಾರೆ ಎಂಬುದು ಪಾಲಿಕೆಯ ವಾದವಾಗಿದೆ.