ನಾರಾಯಣಾಚಾರ್ಯರನ್ನು ಧಾರವಾಡದ ವಿದ್ಯಾರ್ಥಿ ದಿನಗಳಿಂದಲೂ ನಾನು ಬಲ್ಲವನಾಗಿದ್ದೆ. ಅವರು ಭಾರತದ ಸಂಸ್ಕೃತಿ, ವೇದ, ಉಪನಿಷತ್ತು, ಮಹಾಭಾರತ, ರಾಮಾಯಣ, ಭಾಗವತ, ಭಗವದ್ಗೀತೆಗಳ ಬಗ್ಗೆ ತಲಸ್ಪರ್ಶಿ ಜ್ಞಾನವನ್ನು ಹೊಂದಿದ್ದ ಜ್ಞಾನದ ಪರ್ವತವಾಗಿದ್ದರು’’ ಎಂದು ಸಚಿವರು ಸ್ಮರಿಸಿಕೊಂಡರು.
ಅವರ ಗ್ರಂಥಗಳನ್ನು ಮರು ಮುದ್ರಿಸಿ ತಲುಪಿಸುವ ಬಗ್ಗೆ ಅಶ್ವತ್ಥನಾರಾಯಣ ಅವರು ಮುಂದಿನ ಹೆಜ್ಜೆ ಇಡಲಿದ್ದಾರೆ. ಇದಕ್ಕೆ ಕೇಂದ್ರ ಸರಕಾರದಿಂದಲೂ ಅಗತ್ಯ ನೆರವು ಕೊಡಲಾಗುವುದು. ನಾರಾಯಣಾಚಾರ್ಯರ ಬಗ್ಗೆ ಪ್ರಧಾನಿ ಮೋದಿಯವರಿಗೂ ಅಪಾರ ಗೌರವವಿತ್ತು. ಅವರ ನಿಧನದಿಂದ ಸಮಾಜ ಕಳೆಗುಂದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನುಡಿದರು.
ಈ ಸಂದರ್ಭದಲ್ಲಿ ಅವರು ನಾರಾಯಣಾಚಾರ್ಯರ ಗ್ರಂಥಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಡಾ ಸಿಎನ್ ಅಶ್ವತ್ಥನಾರಾಯಣಚಾರ್ಯ, ಮುನಿರತ್ನ ಹಾಜರಿದ್ದರು.
ಸಂಗೀತ ಕಲಾವಿದರು ಓಟಿಟಿ ತರಹದ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು
ಬೆಂಗಳೂರು: ಮೈಸೂರಿನಲ್ಲಿರುವ ಗಂಗೂಬಾಯಿ ಸಂಗೀತ ವಿಶ್ವವಿದ್ಯಾಲಯವನ್ನು ಮುಂದಿನ ಒಂದು ವರ್ಷದಲ್ಲಿ ಜಾಗತಿಕ ಗುಣಮಟ್ಟದೊಂದಿಗೆ ಪುನಶ್ಚೇತನಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದ ಗಾಯನ ಸಮಾಜದಲ್ಲಿ ನಡೆಯುತ್ತಿದ್ದ 51ನೇ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ವ್ಯಕ್ತಿಗಳು ನೆಮ್ಮದಿಯಿಂದ ಬದುಕಬೇಕಾದರೆ ಸಂಸ್ಕೃತಿ ಮತ್ತು ಸಂಸ್ಕಾರಗಳು ಬಹಳ ಮುಖ್ಯ ಎಂದು ಹೇಳಿದರು.
ಶಿಕ್ಷಣದಲ್ಲಿ ಭಾರತೀಯತೆ ಮತ್ತು ಸಂಸ್ಕೃತಿಯ ಇತರ ಅಂಶಗಳೆಲ್ಲವೂ ಇರಬೇಕೆನ್ನುವುದು ಸದಾಶಯವಾಗಿದೆ. ಏಕೆಂದರೆ, ಕೇವಲ ಶಾಲಾಕಾಲೇಜುಗಳ ಓದಷ್ಟೇ ಮುಖ್ಯವಲ್ಲ. ಇದನ್ನು ಮನಗಂಡೇ ಪ್ರಧಾನಿ ನರೇಂದ್ರ ಮೋದಿಯವರು ಸಮಗ್ರ ವಿಕಸನದ ಕಲ್ಪನೆ ಇರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ ಎಂದು ನುಡಿದರು.
100 ದಿನದಲ್ಲಿ 1.20 ಲಕ್ಷ ಮನೆಗಳಿಗೆ ‘ಬೆಳಕು’: ಇಂಧನ ಇಲಾಖೆಯ ಸಾಧನೆ
ಸಂಗೀತ ಕಲಾವಿದರು ಆರ್ಥಿಕವಾಗಿಯೂ ಸದೃಢವಾಗಿರಬೇಕು. ಇದಕ್ಕೆ ಪೂರಕವಾಗಿ ಓಟಿಟಿ ತರಹದ ಆಧುನಿಕ ತಂತ್ರಜ್ಞಾನ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.