ಹೈಲೈಟ್ಸ್:
- ಕರ್ನಾಟಕದಲ್ಲಿ ಹೊಸ ಕೊರೊನಾ ಕೇಸ್ ಅಲ್ಪ ಏರಿಕೆ
- ಇಂದು ರಾಜ್ಯದಲ್ಲಿ 330 ಪಾಸಿಟಿವ್ ಕೇಸ್ಗಳು ದೃಢ
- ಭಾನುವಾರ 4 ಮಂದಿ ಮಹಾಮಾರಿಗೆ ಬಲಿ
ಇನ್ನು, ಇಂದು ಚಿಕಿತ್ಸೆ ಫಲಿಸದೆ 4 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,261ಕ್ಕೆ ಏರಿಕೆಯಾಗಿದೆ. ಇನ್ನು ಇಂದು ಗುಣಮುಖರಾಗಿ 304 ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ 29,54,817 ಆಗಿರುವುದು ಶುಭಸುದ್ದಿಯಾಗಿದೆ.
ಜಿಲ್ಲೆಯಲ್ಲಿ ಹೇಗಿದೆ ಕೊರೊನಾ ಸೋಂಕು?
ಇನ್ನು ಜಿಲ್ಲಾವಾರು ಕೊರೊನಾ ಸೋಂಕಿನ ಮಾಹಿತಿ ನೋಡಾದರೆ 205 ಹೊಸ ಕೊರೊನಾ ಸೋಂಕು ಪ್ರಕರಣ ವರದಿಯಾಗುವ ಮೂಲಕ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ 40 ಕೇಸ್ ಮೂಲಕ ಕೊಡಗು ಎರಡನೇ ಸ್ಥಾನದಲ್ಲಿದೆ. ಇನ್ನು ಬಳ್ಳಾರಿ 03, ಬೆಳಗಾವಿ 07, ಬೀದರ್ 01, ಚಿಕ್ಕಮಗಳೂರು 02, ಚಿತ್ರದುರ್ಗ 02, ದಕ್ಷಿಣಕನ್ನಡ 15, ದಾವಣಗೆರೆ 04, ಧಾರವಾಡ 03, ಹಾಸನ 05, ಹಾವೇರಿ 01, ಕಲಬುರಗಿ 01, ಕೊಡಗು 40, ಕೋಲಾರ 03, ಮಂಡ್ಯ 05, ಮೈಸೂರು 13, ಶಿವಮೊಗ್ಗ 11, ತುಮಕೂರು 05, ಉಡುಪಿ 01, ಉತ್ತರಕನ್ನಡ 02, ವಿಜಯಪುರ 01 ಕೇಸ್ ದೃಢಪಟ್ಟಿದೆ. ಇನ್ನು ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ,
ಚಾಮರಾಜನಗರ, ಚಿಕ್ಕಬಳ್ಳಾಪುರ, ಗದಗ, ಕೊಪ್ಪಳ, ರಾಯಚೂರು, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿ ಒಂದು ಕೂಡ ಕೇಸ್ ದೃಢಪಟ್ಟಿಲ್ಲ.
ರಾಜ್ಯದಲ್ಲಿ ಹೊಸ ಕೊರೊನಾ ಕೇಸ್ ಅಲ್ಪ ಏರಿಕೆ, ಸಕ್ರಿಯ ಪ್ರಕರಣದಲ್ಲೂ ಹೆಚ್ಚಳ
ಒಮಿಕ್ರಾನ್ ಸೋಂಕು ಪ್ರಕರಣ ಮೂರಕ್ಕೆ ಏರಿಕೆ!
ರಾಜ್ಯದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು ರಾಜ್ಯದಲ್ಲಿ ಒಟ್ಟು ಮೂರು ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಆಫ್ರಿಕಾದಿಂದ ವಾಪಸಾಗಿರುವ34 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಒಮಿಕ್ರಾನ್ ಸೋಂಕಿತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಒಮಿಕ್ರಾನ್ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿ ಐವರು, ದ್ವಿತೀಯ ಸಂಪರ್ಕದಲ್ಲಿ 15 ಜನರನ್ನು ಪತ್ತೆ ಮಾಡಲಾಗಿದೆ. ಎಲ್ಲ ಸಂಪರ್ಕಿತರ ಸ್ಯಾಂಪಲ್ಸ್ ಪಡೆದು ಜಿನೋಮಿಕ್ ಸೀಕ್ವೆನ್ಸಿಂಗ್ಗೆ ರವಾನಿಸಲಾಗಿದೆ ಎಂದು ಟ್ವೀಟ್ ಮೂಲಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.