ಹೈಲೈಟ್ಸ್:
- ಕೋವಿಡ್ ನಿಯಂತ್ರಣ ಕ್ರಮಕ್ಕೆ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಪತ್ರ
- ಪ್ರಮುಖ ಸ್ಥಳಗಳಲ್ಲಿ ಆರ್ಎಟಿ ಬೂತ್ಗಳನ್ನು ಸ್ಥಾಪಿಸುವಂತೆ ಸೂಚನೆ
- ಕೊರೊನಾ ವೈರಸ್ನ ಯಾವುದೇ ಲಕ್ಷಣ ಇದ್ದರೂ ಪರೀಕ್ಷೆ ನಡೆಸಲು ಸಲಹೆ
- ಗೃಹ ಪರೀಕ್ಷೆ ಕಿಟ್ಗಳನ್ನು ಬಳಸಿ ಸ್ವಯಂ ಪರೀಕ್ಷೆಗೆ ಒಳಗಾಗಲು ಉತ್ತೇಜಿಸಿ
ಹೊಸ ತಳಿ ಓಮಿಕ್ರಾನ್ ವೈರಸ್ ಜಗತ್ತಿನಾದ್ಯಂತ ನಿಯಂತ್ರಣ ಕ್ರಮಗಳನ್ನು ಮರಳಿ ತರುವಂತೆ ಮಾಡಿದೆ. ಇದು ಅತ್ಯಧಿಕ ಸಾಂಕ್ರಾಮಿಕ ಎನ್ನಲಾಗಿದೆ. ಆದರೆ ಅದರ ತೀವ್ರತೆ ಅಷ್ಟೇನೂ ಮಾರಕವಲ್ಲ ಎನ್ನಲಾಗಿದೆ.
ಹಳೆಯ ದಿನಗಳು ಮರುಕಳಿಸುತ್ತಿವೆ!: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟು ಏರಿಕೆ
ರೋಗ ಲಕ್ಷಣಗಳು ಇರುವ ಎಲ್ಲರೂ ಕೂಡಲೇ ಸ್ವಯಂ ಐಸೋಲೇಟ್ಗೆ ಒಳಗಾಗಬೇಕು ಮತ್ತು ಹೋಮ್ ಐಸೋಲೇಷನ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೇಶಾದ್ಯಂತ, ಮುಖ್ಯವಾಗಿ ದೊಡ್ಡ ನಗರಗಳಲ್ಲಿ ಕೋವಿಡ್ ಪ್ರಕರಣಗಳ ಹಠಾತ್ ಏರಿಕೆ ಚಿಂತೆಗೆ ಕಾರಣವಾಗಿದೆ. ಕೋವಿಡ್ ಎರಡನೇ ಅಲೆ ವೇಳೆ ಆರೋಗ್ಯ ವ್ಯವಸ್ಥೆ ವಿಪರೀತ ಒತ್ತಡಕ್ಕೆ ಸಿಲುಕಿತ್ತು. ಮತ್ತೆ ಅದೇ ರೀತಿಯ ಸ್ಥಿತಿ ಎದುರಾಗುವ ಭೀತಿ ಉಂಟಾಗಿದೆ.
ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವಂತೆಯೂ ರಾಜ್ಯಗಳಿಗೆ ಕೇಂದ್ರ ಸೂಚನೆ ನೀಡಿದೆ. ದೈನಂದಿನ ರಾಷ್ಟ್ರೀಯ ಪರೀಕ್ಷೆಯ ಸಾಮರ್ಥ್ಯವು ಪ್ರತಿದಿನ ಅಂದಾಜು 20 ಲಕ್ಷಕ್ಕೂ ಹೆಚ್ಚು ಇದೆ. ಆರ್ಟಿ-ಪಿಸಿಆರ್ ಪರೀಕ್ಷೆ ವರದಿ ವಿಳಂಬವಾದರೆ, ರಾಜ್ಯಗಳು ರಾಪಿಡ್ ಆಂಡಿಜೆನ್ ಪರೀಕ್ಷೆಗಳು ಅಥವಾ ಆರ್ಎಟಿಯನ್ನು ಆಯ್ದುಕೊಳ್ಳಬೇಕು. ಇದಕ್ಕಾಗಿ ಹೆಚ್ಚಿನ ಬೂತ್ಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದೆ.
‘ಗುರುತಿಸಲಾದ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ಆರ್ಎಟಿ ಬೂತ್ಗಳನ್ನು ಸ್ಥಾಪಿಸಬೇಕು ಮತ್ತು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಬೇಕು. ನಾಗರಿಕರಿಗೆ ವ್ಯಾಪಕ ಪರೀಕ್ಷೆ ಹಾಗೂ ಸುಲಭ ಲಭ್ಯತೆಯನ್ನು ಒದಗಿಸಬೇಕು. ಲಕ್ಷಣಗಳಿರುವ ವ್ಯಕ್ತಿಗಳಿಗೆ ಸ್ವಯಂ ಪರೀಕ್ಷೆಗಳು ಮತ್ತು ಗೃಹ ಪರೀಕ್ಷೆಗಳಿಗೆ ಉತ್ತೇಜನ ನೀಡಬೇಕು. ಇದುವರೆಗೂ ಅಂತಹ ಏಳು ಗೃಹ ಪರೀಕ್ಷೆ ಕಿಟ್ಗಳಿಗೆ ಅನುಮೋದನೆ ನೀಡಲಾಗಿದೆ’ ಎಂದು ಸರ್ಕಾರ ತಿಳಿಸಿದೆ.
ಆದರೆ ಜನರು ಆತಂಕಕ್ಕೆ ಸಿಲುಕುವ ಅಗತ್ಯವಿಲ್ಲ. ಅಂತಹ ಯಾವುದೇ ಪ್ರಕರಣಗಳ ಹಠಾತ್ ಏರಿಕೆಯನ್ನು ಎದುರಿಸಲು ದೇಶ ಈಗಾಗಲೇ ಸನ್ನದ್ಧಗೊಂಡಿದೆ ಎಂದು ಸರ್ಕಾರ ಹೇಳಿದೆ.