Karnataka news paper

ಬೀದರ್‌: ನುಡಿದಂತೆ ನಡೆದ ಬಿಜೆಪಿ ಸರಕಾರ, 4 ವರ್ಷ ನಂತರ ರೈತರ ಜೀವನಾಡಿ ಬಿಎಸ್‌ಎಸ್‌ಕೆ ಕಾರ್ಖಾನೆ ಆರಂಭ!


ಬೀದರ್ : ರಾಜಕೀಯ ಕಿತ್ತಾಟ ಹಾಗೂ ಅನುದಾನದ ಕೊರತೆಯಿಂದ ನಾಲ್ಕು ವರ್ಷಗಳಿಂದ ಬಂದ್ ಆಗಿದ್ದ ಬಿಎಸ್ಎಸ್‌ಕೆ ಸಕ್ಕರೆ ಕಾರ್ಖಾನೆ ಪುರ್ನಾರಂಭವಾಗಿದೆ.

ಬೀದರ್‌ ಕಾರ್ಖಾನೆ ಬಂದ್ ಆಗಿದ್ದ ಕಾರಣ 600ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಂಡು ಬರಗಾಲದಲ್ಲಿ ಹಾಗೂ ಕೊವೀಡ್ ಸಮಯದಲ್ಲಿ ಸಂಕಷ್ಟ ಅನುಭವಿಸಿದ್ದರು. ಇದೀಗ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿರುವುದರಿಂದ ಕೋವಿಡ್ ಸಮಯದಲ್ಲಿ ಜೀವನ ಮಾಡಲು ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಮಿಕರು ಇದೀಗ ಹರ್ಷಗೊಂಡಿದ್ದಾರೆ.

ವಾಹನ ಅಡ್ಡಗಟ್ಟಿ, ಜಗಳ ತೆಗೆಯಲು ಯತ್ನ: ಕೆಪಿಸಿಸಿ ಕಾರ್ಯಾಧ್ಯಕ್ಷನಾದ ನನಗೇ ರಕ್ಷಣೆ ಇಲ್ಲ ಅಂದ್ರು ಈಶ್ವರ್ ಖಂಡ್ರೆ

ಜತೆಗೆ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿರುವ ಕಾರಣ ಜಿಲ್ಲೆಯಾದ್ಯಂತ ರೈತರು ಹರ್ಷಗೊಂಡಿದ್ದು ವಿವಿಧ ಮಠಾಧೀಶರು ಹಾಗೂ ಕಾರ್ಖಾನೆ ಅಧ್ಯಕ್ಷ ಸುಭಾಷ್ ಕಲ್ಲೂರು, ಉಪಾಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಆಡಳಿತ ಮಂಡಳಿ ಸದಸ್ಯರು, ರೈತರು ಕಬ್ಬು ಹಾಯಿಸುವ ಮೂಲಕ ಕಾರ್ಖಾನೆ ಪುರ್ನಾಆರಂಭಕ್ಕೆ ಚಾಲನೆ ನೀಡಿದರು.

ಕಾರ್ಖಾನೆ ಬಂದ್ ಆಗಿದ್ದ ಕಾರಣ ಕೊವೀಡ್ ಸಮಯದಲ್ಲಿ ಜೀವನ ಮಾಡೋದು ಸಂಕಷ್ಟವಾಗಿತ್ತು. ಇದೀಗ ಕಾರ್ಖಾನೆ ಪುನಃ ಪ್ರಾರಂಭವಾಗಿದ್ದು ನಮಗೆ ಬಹಳಷ್ಟು ಖುಷಿ ತಂದಿದೆ ಎಂದು ಖುಷಿ ವ್ಯಕ್ತಪಡಿಸುತ್ತಿದ್ದಾರೆ ಕೆಲಸ ಕಳೆದುಕೊಂಡಿದ್ದ ಕಾರ್ಮಿಕರು.

ಜಿಲ್ಲೆಯ ಅತಿದೊಡ್ಡ ಕಾರ್ಖಾನೆ ಬಿಎಸ್ ಎಸ್ ಕೆ ಈ ಕಾರ್ಖಾನೆಯಿಂದ ಅನೇಕ ರೈತರು ಸಂತೋಷದ ಜೀವನ ನಡೆಸಬಹುದು ಇದೀಗ ಕಾರ್ಖಾನೆ ಹೊಸ ಆಡಳಿತ ಮಂಡಳಿಯಿಂದ ಪ್ರಾರಂಭ ವಾಗಿದ್ದು ಸಂತಸತಂದಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನವರು ಚಿನ್ನದ ಹೆಸರಲ್ಲಿ ತಾಮ್ರದ ನಾಣ್ಯ ಕೊಡ್ತಿದ್ದಾರೆ: ಭಗವಂತ ಖೂಬಾ

ಇದೀಗ ಕಾರ್ಖಾನೆ ಪ್ರಾರಂಭಿಸಲಾಗಿದೆ ಮುಂದಿನ ದಿನಗಳಲ್ಲಿ ಸರಕಾರದಿಂದ ಇನ್ನೂ ಹೆಚ್ಚಿನ ಅದುದಾನ ಬರುವ ನಿರೀಕ್ಷೆ ಇದೆ ಮುಖ್ಯಮಂತ್ರಿಗಳು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಂತೋಷದ ದಿನಗಳು ಬರೋದಿದೆ. ರೈತರು ತಾವು ಬೆಳೆದ ಕಬ್ಬು ಕಾರ್ಖಾನೆಗೆ ಕಳಿಸಿ ಎಂದು ಕಾರ್ಖಾನೆಯ ಉಪಾಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಮನವಿ ಮಾಡಿದರು.

ನಾಲ್ಕು ವರ್ಷಗಳಿಂದ ಹಲವಾರು ಕಾರಣಗಳಿಂದಾಗಿ ಮುಚ್ಚಲಾಗಿದ್ದ ಕಾರ್ಖಾನೆ ಈಗ ಎರಡು ವರ್ಷಗಳಿಂದ ಕೊರೊನಾ ವೈರಸ್‌ನಿದಿಂದಾಗಿ ಕಾರ್ಖಾನೆ ಆರಂಭಕ್ಕೆ ಸಾಕಷ್ಟು ವಿಘ್ನ ಎದುರಾಗಿತ್ತು. ಈಗ ಎಲ್ಲವೂ ಸುಸೂತ್ರವಾಗಿ ಆರಂಭವಾಗಿದೆ.



Read more