Karnataka news paper

ಹಾಸನದ ಎಸ್ಟೇಟ್‌ಗಳಲ್ಲಿ ಕಾರ್ಯನಿರ್ವಹಿಸುವ ಪಶ್ಚಿಮ ಬಂಗಾಳದ 23 ಕಾರ್ಮಿಕರಿಗೆ ಸೋಂಕು


ಹೈಲೈಟ್ಸ್‌:

  • ಪಶ್ಚಿಮ ಬಂಗಾಳದ 23 ಕಾರ್ಮಿಕರಿಗೆ ಸೋಂಕು
  • ಹಾಸನದ ಎಸ್ಟೇಟ್‌ಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು
  • ಕಳೆದ ವಾರ ಇಬ್ಬರು ಕಾರ್ಮಿಕರು ತಮ್ಮ ಸ್ವಂತ ರಾಜ್ಯಕ್ಕೆ ತೆರಳಿದ್ದರು

ಹಾಸನ: ಪಶ್ಚಿಮ ಬಂಗಾಳದಿಂದ ಸಕಲೇಶಪುರ ತಾಲೂಕಿನ ದೇವಿಹಳ್ಳಿ ಎಸ್ಟೇಟ್‌ ಹಾಗೂ ಆನೆಮಹಲ್‌ ಎಸ್ಟೇಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 35 ಕೂಲಿ ಕಾರ್ಮಿಕರಲ್ಲಿ 23 ಮಂದಿಗೆ ಕೋವಿಡ್‌-19 ಸೋಂಕು ಕಾಣಿಸಿಕೊಂಡಿದೆ. ಈ ಕಾರ್ಮಿಕರಲ್ಲಿ ಕಳೆದ ವಾರ ಇಬ್ಬರು ಕಾರ್ಮಿಕರು ತಮ್ಮ ಸ್ವಂತ ರಾಜ್ಯ ಪಶ್ಚಿಮ ಬಂಗಾಳಕ್ಕೆ ತೆರಳಿ ಸಕಲೇಶಪುರಕ್ಕೆ ವಾಪಸಾಗಿದ್ದಾರೆ.

ಈ ಸಂದರ್ಭದಲ್ಲಿಕೋವಿಡ್‌-19 ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಡಿಎಚ್‌ಒ ಸತೀಶ್‌ ಮತ್ತಿತರ ಅಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಇತರೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಹೆಚ್ಚುತ್ತಿದೆ ಕೊರೊನಾ ಸೋಂಕು!
ಹಲವು ತಿಂಗಳ ಬಳಿಕ ರಾಜ್ಯಾದ್ಯಂತ ಕೋವಿಡ್‌-19 ಸೋಂಕು ಉಲ್ಬಣಗೊಂಡಿದ್ದು, ಬುಧವಾರ 566 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಒಟ್ಟು, 1,08,726 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ರಾಜ್ಯದಲ್ಲಿ ಕೊರೊನಾ ಅಬ್ಬರ: ನೈಟ್‌ ಕರ್ಫ್ಯೂ ಜಾರಿ, ಮದ್ಯ ಮಾರಾಟ ಅವಕಾಶಕ್ಕೆ ಮನವಿ

ಸೋಂಕಿನಿಂದ ಬೆಂಗಳೂರಿನಲ್ಲಿ4 ಮಂದಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿತಲಾ ಒಬ್ಬಧಿರೂ ಸೇರಿದಂತೆ 6 ಮಂದಿ ಮೃತಪಟ್ಟಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ ಒಟ್ಟು 38,324ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರವೊಂದರಲ್ಲೇ 400 ಹೊಸ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ33, ಹಾಸನ ಜಿಲ್ಲೆಯಲ್ಲಿ31 ಪ್ರಕರಣಗಳು ಪತ್ತೆಯಾಗಿವೆ.

ಸೋಂಕಿನಿಂದ ಮುಕ್ತರಾಗಿ ರಾಜ್ಯದ ನಾನಾ ಆಸ್ಪತ್ರೆಗಳಿಂದ 245 ಮಂದಿ ಬಿಡುಗಡೆಗೊಂಡಿದ್ದು, ಇದುವರೆಗೆ ಬಿಡುಗಡೆಯಾದವರ ಸಂಖ್ಯೆ 29,59,674 ಮುಟ್ಟಿದೆ. ಪ್ರಸ್ತುತ, 7,771 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 30,05,798 ದಾಟಿದೆ.



Read more