Karnataka news paper

ರಿಲಯನ್ಸ್‌ ನಾಯಕತ್ವ ಹಸ್ತಾಂತರ ಕುರಿತು ಮೊದಲ ಬಾರಿ ಹೇಳಿಕೆ ನೀಡಿದ ಮುಕೇಶ್‌ ಅಂಬಾನಿ!


ಹೊಸದಿಲ್ಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿಯವರು ಮಂಗಳವಾರ ತಮ್ಮ ಉದ್ದಿಮೆ ಸಾಮ್ರಾಜ್ಯದ ನಾಯಕತ್ವವನ್ನು ಹಸ್ತಾಂತ ರಿಸುವ ಬಗ್ಗೆ ಮಾತನಾಡಿದ್ದಾರೆ. ”ಆಕಾಶ್‌, ಇಶಾ ಮತ್ತು ಅನಂತ್‌ ಮುಂದಿನ ಪೀಳಿಗೆಯ ನಾಯಕರಾಗಿ ರಿಲಯನ್ಸ್‌ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ” ಎಂದು ಮುಕೇಶ್‌ ಅಂಬಾನಿ ಹೇಳಿದರು.

ಸಮೂಹದ ಸ್ಥಾಪಕ ಧೀರೂಭಾಯಿ ಅಂಬಾನಿಯವರ ಜನ್ಮ ದಿನದ ಪ್ರಯುಕ್ತ ನಡೆದ ‘ರಿಲಯನ್ಸ್‌ ಫ್ಯಾಮಿಲಿ ಡೇ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಿಲಯನ್ಸ್‌ ಇಂಡಸ್ಟ್ರೀಸ್‌ನ ನಾಯಕತ್ವವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಕ್ರಿಯೆ ಸಮೀಪಿಸಿದೆ. ಹಿರಿಯರು ಹಾಕಿ ಕೊಟ್ಟಿರುವ ಹಾದಿ ಯಲ್ಲಿ ಮುಂದಿನ ಪೀಳಿಗೆಯವರು ಮುನ್ನಡೆಯಲಿದ್ದಾರೆ ಎಂದು ಹೇಳಿದ್ದಾರೆ.

ಮುಕೇಶ್‌ ಅಂಬಾನಿ ಸ್ಪೋರ್ಟ್ಸ್‌ ಚಾನಲ್‌ ಆರಂಭಿಸಲಿದ್ದಾರಾ? ಇಲ್ಲಿದೆ ಮಾಹಿತಿ!

ಇದುವರೆಗೆ ಮುಕೇಶ್‌ ಅಂಬಾನಿ ಯವರು (64) ಬಹಿರಂಗವಾಗಿ ಈ ಬಗ್ಗೆ ಹೇಳಿಕೆ ನೀಡಿರಲಿಲ್ಲ. ಮುಂಬರುವ ವರ್ಷಗಳಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಜಗತ್ತಿನ ಅತ್ಯಂತ ಪ್ರಬಲ ಮತ್ತು ಪ್ರತಿಷ್ಠಿತ ಉದ್ದಿಮೆ ಸಮೂಹಗಳಲ್ಲೊಂದಾಗಿ ಹೊರ ಹೊಮ್ಮಲಿದೆ. ಸ್ವಚ್ಛ ಇಂಧನ, ಹಸಿರು ಇಂಧನದಿಂದ ರಿಟೇಲ್‌, ಟೆಲಿಕಾಂ ತನಕ ಹಲವು ವಲಯಗಳಲ್ಲಿ ವಿಸ್ತರಿಸಲಿದೆ ಎಂದರು. ಹೀಗಿದ್ದರೂ ಉತ್ತರಾಧಿಕಾರ

ಪ್ರಕ್ರಿಯೆ ಬಗ್ಗೆ ಹೆಚ್ಚಿನ ವಿವರಗಳನ್ನು ಅಂಬಾನಿ ಅವರು ನೀಡಿಲ್ಲ. ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯವಾಗಿ ಇಂಧನ, ರಿಟೇಲ್‌, ಟೆಲಿಕಾಂ ವಲಯದಲ್ಲಿ ದೇಶ ವಿದೇಶಗಳಲ್ಲಿ ವ್ಯಾಪಕ ವಹಿವಾಟು ನಡೆಸುತ್ತಿದೆ.



Read more…