Karnataka news paper

ಹೊಸ ವರ್ಷದ ದಿನ 10 ಕೋಟಿ ರೈತರ ಖಾತೆಗೆ 2 ಸಾವಿರ ರೂ. ಜಮೆ!


ಹೈಲೈಟ್ಸ್‌:

  • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯ 10ನೇ ಕಂತಿನ ಹಣ ಜನವರಿ 1ಕ್ಕೆ ಬಿಡುಗಡೆ
  • ಯೋಜನೆಯ ಹಣ ಬಿಡುಗಡೆ ಮಾಡಲಿರುವ ಧಾನಮಂತ್ರಿ ನರೇಂದ್ರ ಮೋದಿ
  • ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 2000 ರೂಪಾಯಿ ಜಮೆ

ಹೊಸದಿಲ್ಲಿ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ (ಪಿಎಂ-ಕಿಸಾನ್‌) ಯೋಜನೆಯ 10ನೇ ಕಂತನ್ನು ಜನವರಿ 1ರಂದು ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಏಕಕಾಲದಲ್ಲಿ ದೇಶದ 10 ಕೋಟಿಗೂ ಅಧಿಕ ರೈತರ ಬ್ಯಾಂಕ್‌ ಖಾತೆಗಳಿಗೆ ತಲಾ ಎರಡು ಸಾವಿರ ರೂ. ಜಮೆಯಾಗಲಿದೆ.

”ಪ್ರಧಾನಿ ನರೇಂದ್ರ ಮೋದಿ ಅವರು ಜ.1ರಂದು ಮಧ್ಯಾಹ್ನ 12 ಗಂಟೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಅವರು ಪಿಎಂಕಿಸಾನ್‌ ಯೋಜನೆಗೆ 10ನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡುವರು. ಅಲ್ಲದೆ 351 ಕೃಷಿ ಉತ್ಪನ್ನ ಸಂಘಟನೆ (ಎಫ್‌ಪಿಒ)ಗಳಿಗೆ 14 ಕೋಟಿ ರೂ. ಅನುದಾನವನ್ನೂ ಪ್ರಧಾನಿ ಬಿಡುಗಡೆ ಮಾಡುವರು. ಇದರಿಂದ 1.24 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಕಾರ್ಯಕ್ರಮದಲ್ಲಿ ಎಫ್‌ಪಿಒ ಸದಸ್ಯರ ಜತೆಗೆ ಸಂವಾದ ಸಹ ನಡೆಸಲಿದ್ದಾರೆ,” ಎಂದು ಪ್ರಧಾನಮಂತ್ರಿ ಕಚೇರಿ ಮಾಹಿತಿ ನೀಡಿದೆ. ದೂರದರ್ಶನದಲ್ಲಿ ಕಾರ್ಯಕ್ರಮದ ನೇರ ಪ್ರಸಾರವಿದೆ.

ಕೇಂದ್ರ ಸರಕಾರವು 2018ರಲ್ಲಿ ಪಿಎಂ-ಕಿಸಾನ್‌ ಯೋಜನೆ ಜಾರಿಗೆ ತಂದಿದ್ದು, ಪ್ರತಿವರ್ಷ ಮೂರು ಕಂತುಗಳಲ್ಲಿ 6,000 ರೂ. ರೈತರ ಖಾತೆಗೆ ನೇರವಾಗಿ ಜಮೆ ಆಗಲಿದೆ. ಇದುವರೆಗೆ ರೈತರ ಖಾತೆಗಳಿಗೆ 1.6 ಲಕ್ಷ ಕೋಟಿ ರೂ. ಜಮೆ ಮಾಡಲಾಗಿದೆ.

ರೈತರೇ ಒಂದ್ನಿಮಿಷ… ಇ-ಕೆವೈಸಿ ಮಾಡದಿದ್ದರೆ ಇನ್ಮುಂದೆ ಬರೋದಿಲ್ಲ ಕೇಂದ್ರ ಸರ್ಕಾರದ ಕಾಸು

ಯಾರೆಲ್ಲ ಫಲಾನುಭವಿ ಆಗಬಹುದು?
ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ಈ ಯೋಜನೆಯ ಸದುಪಯೋಗ ಪಡೆಯಬಹುದು. ಎರಡು ಹೆಕ್ಟೇರ್ವರೆಗಿನ ಕೃಷಿ ಭೂಮಿ ಹೊಂದಿರುವ ಯಾವುದೇ ರೈತರು ಸಹ ಈ ಯೋಜನೆಯ ಫಲಾನುಭವಿಗಳಾಗಬಹುದು. ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ 11.17 ಕೋಟಿಗೂ ಹೆಚ್ಚು ರೈತರು ನೋದಾಯಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಕೇಂದ್ರ ಸರ್ಕಾರ ಸಹಾಯಧನ ನೀಡಿದೆ. ಆಯಾ ಹಣಕಾಸು ವರ್ಷದಲ್ಲಿ ಒಟ್ಟು ಮೂರು ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 6000 ರೂಪಾಯಿ ನೀಡಲಾಗುತ್ತದೆ.

ಪಿಎಂ ಕಿಸಾನ್‌ ನೋಂದಣಿ ಹೇಗೆ?

  • ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ ತೆರೆಯಿರಿ.
  • ಫಾರ್ಮರ್‌ ಕಾರ್ನರ್‌’ ತೆರೆಯಿರಿ.
  • ನಂತರ ನ್ಯೂ ಫಾರ್ಮರ್‌ ರಿಜಿಸ್ಪ್ರೇಶನ್‌ ಕ್ಲಿಕ್ಕಿಸ
  • ಆಧಾರ್‌ ಸಂಖ್ಯೆಯನ್ನು ನಮೂದಿಸಿ
  • ಕ್ಯಾಪ್ಚ ಕೋಡ್‌ ನಮೂದಿಸಿ
  • ಮುಂದಿನ ಪುಟದಲ್ಲಿ ವಿವರಗಳನ್ನು ಭರ್ತಿಗೊಳಿಸಿ
  • ಬ್ಯಾಂಕ್‌ ಖಾತೆಯ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
  • ನಂತರ ಸಬ್‌ಮಿಟ್‌ ಮಾಡಿ.

ದೀಪಾವಳಿಗೆ ಕಿಸಾನ್‌ ಸಮ್ಮಾನ್‌ ಹಣ ದುಪ್ಪಟ್ಟು? ವಾರ್ಷಿಕ ₹6000 ಬದಲು ₹12,000 ನೆರವು!

ಅಗತ್ಯ ದಾಖಲಾತಿಗಳು

  • ಆಧಾರ್ ಕಾರ್ಡ್ – ಅರ್ಜಿ ಸಲ್ಲಿಸುವ ರೈತರಿಗೆ ಆಧಾರ್ ಕಾರ್ಡ್ ಇರುವುದು ಅವಶ್ಯಕ.
  • ಆದಾಯ ದಾಖಲಾತಿ ಹಾಗೂ ಕೃಷಿ ಭೂಮಿ ವಿವರಗಳನ್ನು ನೀಡಬೇಕು.
  • ಉಳಿತಾಯ ಖಾತೆ ಅಥವಾ ಜನ್‌ – ಧನ್ ಖಾತೆ ಹೊಂದಿರುವ ಬ್ಯಾಂಕ್ ಪಾಸ್‌ಬುಕ್ ಹೊಂದಿರಬೇಕು.
  • ರೈತರು ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕು.
  • ರೇಷನ್ ಕಾರ್ಡ್ ಮತ್ತು ಎರಡು ಪಾಸ್‌ಪೋರ್ಟ್‌ ಅಳತೆಯ ಪೋಟೋಗಳು.



Read more