Karnataka news paper

ವ್ಯಕ್ತಿಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವನಿಗೆ ಇದೆ : ಮಾಜಿ ಸಚಿವ ಎಚ್ ಆಂಜನೇಯ


ಹೈಲೈಟ್ಸ್‌:

  • ಮತಾಂತರ ಅದು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದ ಮಾಜಿ ಸಚಿವ
  • ಬಾಗಲಕೋಟೆಯಲ್ಲಿ ಮಾಜಿ ಸಚಿವ ಎಚ್‌ ಆಂಜನೇಯ ಹೇಳಿಕೆ
  • ಜನವಿರೋಧಿ ಕಾಯ್ದೆಗಳು ನಾವು ಬಂದ ಮೇಲೆ ತೆಗೆಯುತ್ತೇವೆ ಎಂದ ಆಂಜನೇಯ

ಬಾಗಲಕೋಟೆ : ಮತಾಂತರ ಅದು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ ಎಂದು ಮಾಜಿ ಸಚಿವ ಎಚ್ ಆಂಜನೇಯ ತಿಳಿಸಿದ್ದಾರೆ. ಅವರು ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ನಾನೀಗ ಹಿಂದೂ ಧರ್ಮದಲ್ಲಿ ಇದ್ದೇನೆ. ರಾಮ ರಾಮ ಅಂತಾರೆ ರಾಮನೇನು ಇವರಪ್ಪನ ಮನೆಯ ಸ್ವತ್ತಲ್ಲ ಎಂದು, ರಾಮನಿಗೆ ಅತಿ ಹತ್ತಿರದವನು ಆಂಜನೇಯ..ಆಂಜನೇಯ ಇಲ್ಲದೆ ರಾಮನಿಲ್ಲ, ರಾಮನಿಲ್ಲದೆ ಆಂಜನೇಯ ಇಲ್ಲ ಎಂದು ಟಾಂಗ್‌ ನೀಡಿದರು.

ನನ್ನ ಹೆಸರು ನಮ್ಮವ್ವ ಆಂಜನೇಯ ಅಂತಹೇಳಿ ಇಟ್ಟಿದ್ದಾಳೆ. ನಾನು ಹಿಂದೂ ಧರ್ಮದಲ್ಲಿ ಇದ್ದೇನೆ ಕಾಂಗ್ರೆಸ್‌ನಲ್ಲಿ ಇದ್ದೇನೆ.ಕೆಲವರು ಒಂದು ಪಾರ್ಟಿಯಲ್ಲಿ ಇದ್ದುಕೊಂಡು ಹಿಂದೂಗಳನ್ನು ಖರೀದಿ ಮಾಡಿದ್ದೇವೆ ಎನ್ನುವ ರೀತಿಯಲ್ಲಿದ್ದಾರೆ. ಯಾವ ಧರ್ಮದಲ್ಲಿ ಇರಬೇಕು ಅನ್ನೋದು ನನಗೆ ಬಿಟ್ಟದ್ದು. ವ್ಯಕ್ತಿಗೆ ಅವನಿಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ. ಬಲವಂತವಾಗಿ ಬೇಕಾದಷ್ಟು ಕಾಯ್ದೆಗಳನ್ನು ಮಾಡಿ ಹಾಕಿದ್ದಾರೆ. ಇವೆಲ್ಲ ಜನವಿರೋಧಿ ಕಾಯ್ದೆಗಳು ನಾವು ಬಂದ ಮೇಲೆ ಅವುಗಳನ್ನೆಲ್ಲ ಸಾಯಿಸಿಬಿಡ್ತೇವೆ. ಜನಾಭಿಪ್ರಾಯಕ್ಕೆ ಮನ್ನಣೆ ಕೊಡುತ್ತೇನೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ಸಿಗರು ಸೋನಿಯಾಗೆ ಹೆದರಿ ಮತಾಂತರ ಕಾಯ್ದೆ ವಿರೋಧಿಸುತ್ತಿದ್ದಾರೆನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವನ್ಯಾವುನು ಮುತಾಲಿಕ್ ಬಿಡ್ರಿ ಎಂದರು. ಇನ್ನು ಪ್ರಧಾನಿ ಹುದ್ದೆ ನಿರಾಕರಿಸಿ ಆಥಿ೯ಕ ತಜ್ಞ ಸಿಂಗ್‌ರನ್ನು ಪ್ರಧಾನಿ ಮಾಡಿದ ತ್ಯಾಗ ಮಹಿಳೆ. ಆದಶ೯ಮಯಿ. ಭಾರತದ ಹೆಸರನ್ನು ಇಡೀ ಪ್ರಪಂಚಕ್ಕೆ ಎತ್ತಿ ಹಿಡಿದು ಕೀತಿ೯ ತಂದಿದ್ದಾರೆ ಎಂದ ಅವರು, ಅಂತ ಮಹಿಳೆ ಟೀಕಿಸುವ ಯೋಗ್ಯತೆ, ನೈತಿಕತೆ ಮುತಾಲಿಕ್ ಗೆ ಇಲ್ಲ. ಸೋನಿಯಾಗಾಂಧಿ ಈ ದೇಶದ ಆದಶ೯ ಮಹಿಳೆ. ಅವರನ್ನು ಓಲೈಸಿ ಹೇಳುವಂತಹದ್ದೇನಿಲ್ಲ ಎಂದು ತಿರುಗೇಟು‌ ನೀಡಿದರು.

ದೇಶದಲ್ಲಿ ಜನ್ರು ವಿರೋಧ ಮಾಡುವ ಕಾಯ್ದೆ ಜಾರಿಗೆ ತಂದ್ರೆ ನಾವು ವಿರೋಧಿಸುತ್ತೇವೆ. ಅವರಿವರನ್ನು ಓಲೈಸೋರು ನಾವಲ್ಲ ಎಂದು ಹೇಳಿದರು. ಸೋನಿಯಾಗಾಂಧಿ ಎಲ್ಲ ದೇವರನ್ನು ಆರಾಧಿಸಿ ಸವ೯ ಧಮಿ೯ಯ ನಾಯಕಿಯಾಗಿದ್ದಾರೆ. ವಿದೇಶದಿಂದ ಬಂದು ಅತ್ತೆ ಕಳೆದುಕೊಂಡಳು, ಗಂಡನನ್ನ ಕಳೆದುಕೊಂಡು ವಿಧವೆ ಆದಳು. ಹಾಗಿದ್ರೆ ಪ್ಯಾಕಪ್ ಮಾಡಿಕೊಂಡು ಹೋಗಲಿಲ್ಲ. ಎಲ್ಲವನ್ನು ಬಿಟ್ಟು ಇಲ್ಲಿಯೇ ಉಳಿದ್ರು. ಇಂತವರನ್ನು ಟೀಕೆ ಮಾಡೋರಿಗೆ ಯಾವುದೇ ಜ್ಞಾನ ಇಲ್ಲ ಎಂದರು.

ಮಂಗಳೂರು ಆತ್ಮಹತ್ಯೆ ಪ್ರಕರಣ!
ಮಂಗಳೂರಿನಲ್ಲಿ ಆತ್ಮಹತ್ಯೆ ಗೊಂಡ ಬಾಗಲಕೋಟ ಜಿಲ್ಲೆಯ ಸುನಗ ಗ್ರಾಮದ ನಾಲ್ವರ ಆತ್ಮಹತ್ಯೆ ಪ್ರಕರಣ ವಿಚಾರವಾಗಿ‌ ಪ್ರತಿಕ್ರಿಯೆ ನೀಡಿದ ಆಂಜನೇಯ ಅವರು, ಮತಾಂತರದ ಒತ್ತಾಯ ಇಲ್ಲ, ಪತ್ತಾಯ ಇಲ್ಲ, ಹಾಗೆ ಮಾಡಿರ್ತಾರೆ ಬಿಡ್ರಿ.ಪೋಲಿಸ್ ಇಲಾಖೆ ತನಿಖೆಯಾಗಿ ನ್ಯಾಯಾಂಗ ರಿಪೋರ್ಟ್ ಆಗಿ ನ್ಯಾಯಾಧೀಶರ ಹೇಳಿದರೆ ಬಲವಂತ ಎಂದು ಒಪ್ಪಬಹುದು.ಯಾವ ಕಾರಣಕ್ಕೆ ಸತ್ತುಹೋಗಿದ್ದಾರೆ ಯಾರಿಗೆ ಗೊತ್ತು ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ಅವರವರು ಧರ್ಮದ್ದು ಪ್ರಚಾರ ಅವರವರು ಮಾಡ್ತಾರೆ. ಕ್ರೈಸ್ತರು ತಮ್ಮ ಧಮ೯ದ್ದು ಸ್ವಲ್ಪ ಸ್ವಲ್ಪ ಪ್ರಚಾರ ಮಾಡ್ತಾರೆ. ಅವರ ಧರ್ಮ ಬೋಧನೆ ಮಾಡಿ ಅವರ ಧರ್ಮದ್ದು ಅವರು ಹೇಳ್ತಾರೆ. ನಮ್ಮ ಧರ್ಮವು ಚೆನ್ನಾಗಿದೆ ಅಂತ ಪ್ರಚಾರ ಮಾಡಿ ಇವರು ಉಳಿಸಿಕೊಳ್ಳಲು ಯಾರು ಬೇಡ ಅಂತಾರೆ. ಹಿಂದೂ ಧರ್ಮ ಪ್ರಚಾರ ಮಾಡಿ ಮನಸ್ಸು ಪರಿವರ್ತನೆ ಮಾಡಿ ನಮ್ಮ ಧರ್ಮದಲ್ಲೇ ಉಳಿಯುವಂತೆ ಮಾಡಲಿ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.

ಮಕ್ಕಳಿಗೆ ಮೊಟ್ಟೆ ವಿತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,ಆಹಾರ ಆಯ್ಕೆ ಅವರ ಇಷ್ಟಕ್ಕೆ ಬಿಟ್ಟ ವಿಚಾರ. ವೀಕ್ ಇದ್ದ ಮಕ್ಕಳಿಗೆ ಮೊಟ್ಟೆ ತಿನ್ನುವಂತೆ ಡಾಕ್ಟರೇ ಸಲಹೆ ಕೊಡ್ತಾರೆ. ಅದನ್ನ ಸ್ವಾಮಿಜಿಗಳು ವಿರೋಧ ಮಾಡೋದು ಸರಿಯಲ್ಲ. ಮೊಟ್ಟೆ ತಿನ್ನದ ಸಮುದಾಯ ವಿದ್ದರೆ ತಿನ್ನೋದು ಬೇಡಾ, ತಿನ್ನುವ ಮಕ್ಕಳಿದ್ದರೆ ತಿನ್ನಲಿ ಎಂದ ಅವರು, ಸ್ವಾಮಿಗಳು ಸ್ವಲ್ಪ ಯೋಚನೆ ಮಾಡಿ ಹೇಳಿಕೆ ನೀಡಬೇಕು‌.

ನಾನು ಎಲ್ಲ ಮಕ್ಕಳಿಗೂ ತಿನ್ನಿಸಿ ಅಂತಾ ಹೇಳಲ್ಲ, ಇಷ್ಟ ಪಡೋ ಮಕ್ಕಳಿಗೆ ಮೊಟ್ಟೆ ನೀಡಿ ಅಂತಾ ಹೇಳುತ್ತಾನೆ. ನಾವು ಸ್ಕೂಲ್ ಗೆ ಹೋಗೋವಾಗ ಏನೇನೂ ಇರಲಿಲ್ಲ. ಬಡತನ ಸ್ಕೂಲ್ ಗೆ ಉಪವಾಸ ಹೋಗ್ತಿದ್ದೇವು,ತಲೆ ತಿರುಗಿ ಬಿಳ್ತಿದ್ದೇವು. ಈಗೀನ ಶಾಲಾಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ, ಕ್ಷೀರಭಾಗ್ಯ,ಮೊಟ್ಟೆ.ಸರ್ಕಾರ ಮಕ್ಕಳ ಆರೋಗ್ಯ ಗಮನಿಸಿ ಪೌಷ್ಠಿಕ ಆಹಾರ ನೀಡುತ್ತದೆ ಎಂದರು.



Read more