Karnataka news paper

ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ: ಭಾರತೀಯ ರಾಜತಾಂತ್ರಿಕನಿಗೆ ಇಮ್ರಾನ್ ಖಾನ್ ಸರ್ಕಾರ ಸಮನ್ಸ್



ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ: ಭಾರತೀಯ ರಾಜತಾಂತ್ರಿಕನಿಗೆ ಇಮ್ರಾನ್ ಖಾನ್ ಸರ್ಕಾರ ಸಮನ್ಸ್

ಸಾಂದರ್ಭಿಕ ಚಿತ್ರ

The New Indian Express

ಇಸ್ಲಾಮಾಬಾದ್: ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣಗಳು ಮಾಡಲ್ಪಟ್ಟಿರುವುದಾಗಿ ಆರೋಪಿಸಿರುವ ಪಾಕಿಸ್ತಾನ ಈ ಸಂಬಂಧ ಇಸ್ಲಾಮಾಬಾದಿನ ಭಾರತೀಯ ರಾಜತಾಂತ್ರಿಕ ಅಧಿಕಾರಿಗೆ ಸಮನ್ಸ್ ಜಾರಿ ಮಾಡಿದೆ.

ಇದನ್ನೂ ಓದಿ: ದ್ವೇಷಕಾರಿ ಭಾಷಣ ಪ್ರಕರಣ: ಅಕ್ಬರುದ್ದೀನ್ ಓವೈಸಿ ನಿರ್ದೋಷಿ- ವಿಶೇಷ ನ್ಯಾಯಾಲಯ ತೀರ್ಪು

ಧರ್ಮ ಸಂಸದ್ ಅಧಿವೇಶನದಲ್ಲಿ ಅಲ್ಪಸಂಖ್ಯಾತರನ್ನು ಕೊಲ್ಲಬೇಕು ಎನ್ನುವ ಅರ್ಥದಲ್ಲಿ ಭಾಷಣಗಳನ್ನು ನೀಡಲಾಗಿದ್ದು, ಭಾರತ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಆಘಾತ ತಂದಿದೆ ಎಂದು ಪಾಕ್ ಅಭಿಪ್ರಾಯಪಟ್ಟಿದೆ. 

ಇದನ್ನೂ ಓದಿ: ‘ಉರಿ’ ದಾಳಿಯ ಬಳಿಕ ರದ್ದುಗೊಂಡಿದ್ದ ಸಾರ್ಕ್ ಶೃಂಗಸಭೆ ಮರು ಆಯೋಜನೆಗೆ ಪಾಕಿಸ್ತಾನ ಉತ್ಸುಕ

ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಬಿತ್ತುವ ಚಟುವಟಿಕೆಗಳನ್ನು ನಿರ್ಬಂಧಿಸುವ ಜವಾಬ್ದಾರಿ ಭಾರತದ ಮೇಲಿದೆ, ಮುಂದಿನ ದಿನಗಳಲ್ಲಿ ಈ ಬಗೆಯ ಘಟನೆಗಳು ನಡೆಯದಂತೆ ಭಾರತ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದಿದೆ ಇಮ್ರಾನ್ ಸರ್ಕಾರ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಬಿಜೆಪಿ ನಾಯಕರ ಸಂಬಂಧಿಕರಿಂದಲೇ ಭೂಕಬಳಿಕೆ: ಯೋಗಿ ಸರ್ಕಾರ ತನಿಖೆಗೆ ಆದೇಶ

ಈ ಹಿಂದೆ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಹರಿದ್ವಾರದ ಧರ್ಮ ಸಂಸದ್ ಅಧಿವೇಶನ ಕುರಿತಾಗಿ ವಿರೋಧ ವ್ಯಕ್ತಪಡಿಸಿದ್ದವು. ಅಧಿವೇಶನದಲ್ಲಿ ಕೋಮು ಪ್ರಚೋದಕ ಭಾಷಣ ನೀಡಿದ ಜಿತೇಂದ್ರ ನಿತ್ಯಾನಂದ ತ್ಯಾಗಿ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿತ್ತು.

ಇದನ್ನೂ ಓದಿ: ಭಾಷೆ, ಭಾವನೆಗಳ ಮಧ್ಯೆ ಬೆಂಕಿ ಹಚ್ಚಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಹವಣಿಕೆ: ಬಿಜೆಪಿ ಟೀಕೆ




    Read more