Karnataka news paper

ವಿ.ಡಿ. ಸಾವರ್ಕರ್ ಕುರಿತ ಹೇಳಿಕೆ ವಿವಾದ: ಸಮಾಜವಾದಿ ನಾಯಕನಿಗೆ ಅಪರಿಚಿತನಿಂದ ಬೆದರಿಕೆ ಕರೆ



ವಿ.ಡಿ. ಸಾವರ್ಕರ್ ಕುರಿತ ಹೇಳಿಕೆ ವಿವಾದ: ಸಮಾಜವಾದಿ ನಾಯಕನಿಗೆ ಅಪರಿಚಿತನಿಂದ ಬೆದರಿಕೆ ಕರೆ

ವಿ.ಡಿ. ಸಾವರ್ಕರ್

The New Indian Express

ಪಾಟ್ನಾ: ಬಿಹಾರದ ಹಿರಿಯ ಸಮಾಜವಾದಿ ನಾಯಕ ಶಿವಾನಂದ ತಿವಾರಿ ಅವರೆ ಫೋನ್ ಕರೆ ಮಾಡಿದ  ದುಷ್ಕರ್ಮಿಯೋರ್ವ ನಿಂದಿಸಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ. 

ಇದನ್ನೂ ಓದಿ: ದೇಶ ಇಂದು ಅನುಭವಿಸುತ್ತಿರುವ ನೋವು, ದುಃಖಕ್ಕೆ ಹಿಂದುತ್ವವಾದಿಗಳೇ ಕಾರಣ: ರಾಹುಲ್ ಗಾಂಧಿ

ಶಿವಾನಂದ ತಿವಾರಿ ಅವರು ಇತ್ತೀಚಿಗಷ್ಟೆ ಪತ್ರಿಕಾ ಸಂದರ್ಶನವೊಂದರಲ್ಲಿ ವಿ.ಡಿ ಸಾವರ್ಕರ್ ಕುರಿತಾಗಿ ಹೇಳಿಕೆಯನ್ನು ನೀಡಿದ್ದರು. ಆ ಸಂದರ್ಶನದಲ್ಲಿ ಸಾವರ್ಕರ್ ಅವರಿಗೆ ಗೋವನ್ನು ಪೂಜಿಸುವ ಪರಿಕಲ್ಪನೆ ಸುತಾರಾಂ ಇಷ್ಟವಿರಲಿಲ್ಲ ಎಂದಿದ್ದರು.

ಇದನ್ನೂ ಓದಿ: ‘ವಿಶ್ವದ ಪರಿಶುದ್ಧ ಧರ್ಮ… ಹಿಂದೂ ಧರ್ಮ’; ಇಸ್ಲಾಂ ತೊರೆದು ಸನಾತನ ಧರ್ಮ ಸೇರಿದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ

ಶಿವಾನಂದ ತಿವಾರಿ ಅವರು ಜಯಪ್ರಕಾಶ್ ನಾರಾಯಣ್ ಹಾಗೂ ರಾಮಮನೋಹರ್ ಲೋಹಿಯ ಥರದ ಮಹಾನ್ ನಾಯಕರೊಡನೆ ಅವರೊಂದಿಗೆ ಕೆಲಸ ಮಾಡಿದವರು. ಸದ್ಯ ಅವರು ಆರ್ ಜೆ ಡಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: ಮರು ಮತಾಂತರಗೊಂಡು ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿ: ಮತಾಂತರಿತ ಮುಸ್ಲಮರಿಗೆ ಹಿಂದೂ ಸಂಘಟನೆ ಮನವಿ




    Read more