Karnataka news paper

‘ಅನಂತಾಶ್ವಥ’ ಗಾಯನ ಲೋಕದ ದಿಗ್ಗಜರಿಗೆ ಗೀತ ನಮನ: ಅನಿವಾಸಿ ಕನ್ನಡಿಗರಿಗೆ ‘ಕೆಓಟಿಟಿ’ಯಲ್ಲಿ ಕಾರ್ಯಕ್ರಮ


ಲೇಖಕರು: ಅನಿಲ್‌ ಭಾರದ್ವಾಜ್, ಫೀನಿಕ್ಸ್, ಯುಎಸ್‌ಎ

ಅತ್ತ ಮೈಸೂರು ಅನಂತಸ್ವಾಮಿ ಇತ್ತ ಡಾ. ಸಿ. ಅಶ್ವಥ್. ಈ ಇಬ್ಬರು ಮಹಾನ್‌ ಕನ್ನಡ ಗಾಯಕರ ಗಾನ ಸುಧೆಯ ಮಧುರ ಆಲಾಪವೊಂದೇ ಸಾಕು, ಇಳಿ ಸಂಜೆಯ ಮುಗಿಲ ಕೆಂಪು ಕರಗುವ ಹೊತ್ತಲಿ.

ಇವರಿಬ್ಬರು ಕನ್ನಡಿಗರಿಗಾಗಿ ಶಾಶ್ವತವಾಗಿ ಕಟ್ಟಿಕೊಟ್ಟ ಭಾವಗೀತೆಗಳ ಮಹಾಕೋಟೆಯಲ್ಲಿ ವಿರಮಿಸದೇ ಉಳಿದವರು ದುರಾದೃಷ್ಟವಂತರು ಎಂದೇ ಹೇಳಬಹುದು. ಇಂತಹ ಮೇರು ಗಾಯಕರ ನೆನಪಿಗಾಗಿ ಬೆಂಗಳೂರಿನಲ್ಲಿ ಡಿಸೆಂಬರ್‌ 11, 2021ರಂದು ‘ಅನಂತಾಶ್ವಥ‘ ಭಾವತಾರೆಗಳ ಗಾನ ಮಹೋತ್ಸವ ಎಂಬ ವಿಶೇಷ ಗೀತ ಗಾಯನ ಕಾರ್ಯಕ್ರಮ ನಡೆಯಿತು.

c Ashwath

ಹಿರಿಯ ಸಂಗೀತ ನಿರ್ದೇಶಕ ಎಸ್‌. ಬಾಲಿ ಅವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ, ನಾಕು ತಂತಿ ಸಂಗೀತ ಗುಚ್ಛ ಮತ್ತು ಸಮುದ್ಯತಾ ಶಾಲೆ ಇವರೊಂದಿಗೆ ಖ್ಯಾತ ಸುಗಮ ಸಂಗೀತ ಕಲಾವಿದರಾದ ಪ್ರದೀಪ್‌ ಮತ್ತು ಪ್ರವೀಣ್‌ ಇವರು ಮೈಸೂರು ಅನಂತಸ್ವಾಮಿ ಹಾಗೂ ಡಾ. ಸಿ. ಅಶ್ವಥ್‌ ಅವರುಗಳ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಜನಪ್ರಿಯ ಭಾವಗೀತೆಗಳ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಿ. ಅಶ್ವಥ್‌ ಅವರ ಗರಡಿಯಲ್ಲಿ ಬೆಳೆದು ಪಳಗಿದ ಪ್ರದೀಪ್‌ ಮತ್ತು ಪ್ರವೀಣ್‌ ಅವರೊಂದಿಗೆ ಮಧು ಮನೋಹರನ್‌ ಸಹ ದನಿಗೂಡಿಸಿದರು. ಕಾರ್ತಿಕ್‌ ಪಾಂಡವಪುರ ಅವರ ನೇತೃತ್ವದ ವಾದ್ಯ ವೃಂದ ಈ ಗಾಯನ ಸಂಜೆಗೆ ಸಾಥ್‌ ನೀಡಿತು.

ನಮ್ಮೇರಿಕ ಅಂತಾರಾಷ್ಟ್ರೀಯ ನಾಟಕೋತ್ಸವ ಏಪ್ರಿಲ್‌ 10 ರಿಂದ ಆರಂಭ
ಅನಿವಾಸಿ ಕನ್ನಡಿಗರಿಗಾಗಿ ಮೊದಲ ಬಾರಿಗೆ ಅಮೆರಿಕದ ಲಾಸ್‌ ಏಂಜಲಿಸ್‌ ನಗರದಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಕನ್ನಡದ ಓಟಿಟಿ’ಕೆಓಟಿಟಿ.ಟಿವಿ’ https://kott.tv/ ಯಲ್ಲಿ ಉಚಿತವಾಗಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ವಿಶ್ವವ್ಯಾಪಿ ನೆಲೆಸಿರುವ ಕನ್ನಡಿಗರಿಗಾಗಿ ಹೊಸ ವರ್ಷದ ಕೊಡುಗೆಯಾಗಿ ಜನವರಿ 1, 2022ರಂದು ಈ ಕಾರ್ಯಕ್ರಮವನ್ನು ಉಚಿತವಾಗಿ ಪ್ರಸಾರ ಮಾಡಲಾಗುವುದು ಎಂದು ಸಹ ಸಂಸ್ಥಾಪಕರಾದ ವಲ್ಲೀಶ ಶಾಸ್ತ್ರಿ ತಿಳಿಸಿದ್ದಾರೆ.

Mys Ananth swamy

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಅನಂತಾಶ್ವಥ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಖ್ಯಾತನಾಮರಾದ ಟಿ. ಎನ್‌. ಸೀತಾರಾಮ್, ಎಚ್. ಎಸ್‌. ವೆಂಕಟೇಶ ಮೂರ್ತಿ, ಬಿ. ಆರ್‌. ಲಕ್ಷಣ್‌ ರಾವ್‌, ಶ್ರೀನಿವಾಸ ಕಪ್ಪಣ್ಣ, ಸಂಗೀತಾ ಕಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ. ಎಸ್. ನಾಗಾಭರಣ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ‌

ಅನಿವಾಸಿ ಕನ್ನಡಿಗರಿಗಾಗಿಯೇ ಆರಂಭವಾಗಿರುವ ಕೆಓಟಿಟಿ.ಟಿವಿ https://kott.tv/ ಚಾನಲ್‌ ಈಗಾಗಲೇ ಎಲ್ಲೆಡೆ ಸದ್ದು ಮಾಡುತ್ತಿದ್ದು, ಈ ಕೊರೊನಾ – ಓಮಿಕ್ರಾನ್ ಸಾಂಕ್ರಾಮಿಕ ಸಮಯದಲ್ಲಿ ‌ಆದಷ್ಟು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಪ್ರಯತ್ನದಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನಾಗಲಿ, ನಾಟಕಗಳನ್ನಾಗಲಿ, ಸಂಗೀತ ಕಾರ್ಯಕ್ರಮಗಳನ್ನಾಗಲಿ ಮುಖತಃ ಆಯೋಜಿಸಿವುದು ಅಸಾಧ್ಯವಾಗಿರುವುದರಿಂದ ಕರ್ನಾಟಕದಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೇ ಕೆಓಟಿಟಿಯಲ್ಲಿ ಪ್ರಸಾರ ಮಾಡಿ ಅನಿವಾಸಿ ಕನ್ನಡಿಗರ ಮನೆಯಂಗಳಕ್ಕೆ ತರುವ ಪ್ರಯತ್ನದಲ್ಲಿದೆ.

ಸಾಧನೆ ಮೆರೆದ ಮಹಿಳೆಯರೊಂದಿಗೆ ನಾವಿಕ ಸಂವಾದ: ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಅಲ್ಲದೆ ಸಾಧ್ಯವಾದಷ್ಟು ಕಾರ್ಯಕ್ರಮಗಳನ್ನು ಉಚಿತವಾಗಿಯೇ ಬಿತ್ತರಿಸುವ ಯೋಜನೆ ಹಾಕಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಈ ರೀತಿ ಕಾರ್ಯಕ್ರಮಗಳ ಪ್ರಸಾರದಿಂದ ಅನಿವಾಸಿ ಕನ್ನಡಿಗರಿಗೆ ಮನೆಯಲ್ಲೇ ಮನರಂಜನೆ ಸಿಕ್ಕರೆ ಅತ್ತ ಕಲಾವಿದರೂ ವಿಶ್ವ ವ್ಯಾಪಿ ಕಲಾ ರಸಿಕರಿಗೆ ಪರಿಚಯವಾದಂತಾಗುತ್ತದೆ. ಅಲ್ಲದೇ ಆಸಕ್ತರು ಕರ್ನಾಟಕದ ಕಲಾವಿದರಿಗೆ ಧನ ಸಹಾಯ ಮಾಡಲೂ ಅನುಕೂಲವಾಗುತ್ತದೆ.

ಈಗಾಗಲೇ ಅಮೆರಿಕದ ಕೆಲ ರಾಜ್ಯಗಳಲ್ಲಿ ಕೋವಿಡ್‌ ಮತ್ತು ಓಮಿಕ್ರಾನ್‌ ಸಂಕ್ರಾಮಿಕ ಸೋಂಕು ಉಲ್ಬಣವಾಗುತ್ತಿದ್ದು ಸ್ಥಳೀಯ ಸರ್ಕಾರಗಳು ಕೆಲವೊಂದು ಕಠಿಣ ನಿಯಮಗಳನ್ನು ಜಾರಿಗೆ ತರಲು ಹೊರಟಿವೆ. ಈ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ವಂಚಿತರಾಗದಿರಲಿ ಎಂಬ ಸದುದ್ದೇಶದಿಂದ ತಮ್ಮ ಕೆಓಟಿಟಿ.ಟಿವಿಯಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಉಚಿತವಾಗಿ ಪ್ರಸಾರ ಮಾಡಲು ನಿರ್ಧರಿಸಿರುವುದಾಗಿ ವಲ್ಲೀಶ ತಿಳಿಸಿದ್ದಾರೆ. ಅನಂತಾಶ್ವಥ ಕಾರ್ಯಕ್ರಮ ವೀಕ್ಷಿಸಲು ಜನವರಿ 1, 2022ರಂದು ಕೆಓಟಿಟಿ.ಟಿವಿ https://kott.tv/ ಗೆ login ಆಗಿ ಕಾರ್ಯಕ್ರಮವನ್ನು ಉಚಿತವಾಗಿ ವೀಕ್ಷಿಸಬಹುದು.

ಅಮೆರಿಕದ ಅಲ್ಬನಿ ಕನ್ನಡ ಕಲಿ ಶಾಲೆಯ ವಾರ್ಷಿಕ ಸಮಾರಂಭ: ದಟ್ಟ ಕಾಡಿನಲ್ಲಿ ನಡೆಯಿತು ಕಾರ್ಯಕ್ರಮ



Read more