Karnataka news paper

ನರೇಗಾ ಕೆಲಸ ಖಚಿತ, ಕೂಲಿಗಿಲ್ಲ ಖಾತ್ರಿ; ದುಡಿವ ಕೈಗಳಿಗೆ 5 ತಿಂಗಳಿನಿಂದ ಸರ್ಕಾರ ನೀಡಿಲ್ಲ ಸಂಬಳ!


ಹೈಲೈಟ್ಸ್‌:

  • ನರೇಗಾ ಯೋಜನೆ ಜಾರಿಯಲ್ಲಿ ಸರಕಾರ ತೋರಬೇಕಾಗಿದ್ದ ಕಾಳಜಿ ಮಾಯವಾಗಿದೆ. ಇದರಿಂದ ಕಾರ್ಮಿಕರು ಹಸಿವಿನಲ್ಲಿ ಕಾಲತಳ್ಳುವ ಪರಿಸ್ಥಿತಿ ಉಂಟಾಗಿದೆ.
  • ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಸರಕಾರ 5 ತಿಂಗಳಿನಿಂದ ಕೂಲಿ ನೀಡಿಲ್ಲ. ದಿನಕ್ಕೊಂದು ನೆಪ ಹೇಳಿ ಸತಾಯಿಸುತ್ತಿದೆ
  • ಮಿತಿ ಶೀಘ್ರ ರಚನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಆಯುಕ್ತರು 2016 ಜುಲೈ 08ರಂದು ಹೊರಡಿಸಿದ ಆದೇಶ ಇನ್ನೂ ಕಾರ‍್ಯಗತವಾಗಿಲ್ಲ

ರಾಘವೇಂದ್ರ ಮೇಗರವಳ್ಳಿ ತೀರ್ಥಹಳ್ಳಿ
ಶಿವಮೊಗ್ಗ: ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ಉದ್ದೇಶದಿಂದ ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ರೂಪಿಸಲಾಗಿದೆ. ಆದರೆ ಇದರ ಜಾರಿಯಲ್ಲಿ ಸರಕಾರ ತೋರಬೇಕಾಗಿದ್ದ ಕಾಳಜಿ ಮಾಯವಾಗಿದೆ. ಇದರಿಂದ ಕಾರ್ಮಿಕರು ಹಸಿವಿನಲ್ಲಿ ಕಾಲತಳ್ಳುವ ಪರಿಸ್ಥಿತಿ ಉಂಟಾಗಿದೆ. ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಸರಕಾರ 5 ತಿಂಗಳಿನಿಂದ ಕೂಲಿ ನೀಡಿಲ್ಲ. ದಿನಕ್ಕೊಂದು ನೆಪ ಹೇಳಿ ಸತಾಯಿಸುತ್ತಿದೆ.

ಎಲ್ಲೂ ಇಲ್ಲ ಸಮಿತಿ
ನರೇಗಾ ಯೋಜನೆ ಕಾಮಗಾರಿ ಉಸ್ತುವಾರಿಗೆ ಪ್ರತಿ ಗ್ರಾಮದಲ್ಲಿ ಸಾರ್ವಜನಿಕ ಸಹಭಾಗಿತ್ವದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಗೆ ಸರಕಾರ 5 ವರ್ಷಗಳ ಹಿಂದೆಯೇ ಹೊರಡಿಸಿದ್ದ ಆದೇಶ ಇನ್ನೂ ಜಾರಿಗೆ ಬಂದಿಲ್ಲ. ಇದರ ಬಗ್ಗೆ ಸರಕಾರ ಗ್ರಾ.ಪಂ. ಆಡಳಿತದಿಂದ ಯಾವುದೇ ಸ್ಪಷ್ಟೀಕರಣ ಕೇಳಿಲ್ಲ.
ಶಿವಮೊಗ್ಗದಲ್ಲಿ ಬಗರ್‌ಹುಕುಂ ಬಿಕ್ಕಟ್ಟು; ಅಧಿಕಾರವಿದ್ದರೂ ಹಕ್ಕು ಮರೀಚಿಕೆ!
ಕಣ್ಗಾವಲು ಇಲ್ಲ
2007ರ ಫೆಬ್ರವರಿ 01ರಂದು ಹೊರಡಿಸಿದ ಕರ್ನಾಟಕ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆ ನಿಯಮ 20ರಂತೆ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಯನ್ನೇ ಉದ್ದೇಶಿತ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ‍್ಯನಿರ್ವಹಣೆಗೆ ಬಳಸಿಕೊಳ್ಳಲು ಸರಕಾರ ಅವಕಾಶ ನೀಡಿದೆ. ನರೇಗಾ ಯೋಜನೆಯಡಿ ಅನುಷ್ಠಾನದ ಕಾಮಗಾರಿಗಳ ಪ್ರಗತಿ, ಗುಣಮಟ್ಟ ಗಮನಿಸುವ ಮಹತ್ವದ ಜವಾಬ್ದಾರಿ ಜಾಗೃತ ಮತ್ತು ಮೇಲುಸ್ತುವಾರಿ ಸಮಿತಿ ವ್ಯಾಪ್ತಿಯಲ್ಲಿದೆ.

ಪ್ರತಿ ಗ್ರಾಮದಲ್ಲೂ 9 ಸದಸ್ಯರ ಸಮಿತಿ ಕಾರ‍್ಯನಿರ್ವಹಣೆ ಅಗತ್ಯ
ಸಮಿತಿ ಶೀಘ್ರ ರಚನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಆಯುಕ್ತರು 2016 ಜುಲೈ 08ರಂದು ಹೊರಡಿಸಿದ ಆದೇಶ ಇನ್ನೂ ಕಾರ‍್ಯಗತವಾಗಿಲ್ಲ.
ಗೌರಿಬಿದನೂರಲ್ಲಿ ಉಳುಮೆ ಮತ್ತು ಕೊಯ್ಲು ಉಚಿತ! ರಾಜ್ಯಕ್ಕೇ ಮಾದರಿ ಈ ಯೋಜನೆ!
ಸಂಬಳಕ್ಕಿಲ್ಲ ಖಾತ್ರಿ
ಶಾಸನಬದ್ಧ ನರೇಗಾ ಯೋಜನೆಯಡಿ ನಿಗದಿ 7 ದಿನದೊಳಗೆ ಕೂಲಿ ಕೆಲಸದ ಸಂಬಳವನ್ನು ಕಾರ್ಮಿಕರಿಗೆ ನೀಡಬೇಕಿದೆಯಾದರೂ ಈಗ ಸಂಬಳಕ್ಕೂ ಖಾತ್ರಿ ಇಲ್ಲದಂತಾಗಿದೆ. ತಾಲೂಕಿನಲ್ಲಿ ಪಂಚಾಯತ್‌ರಾಜ್‌ ಮತ್ತು ಪಂಚಾಯತ್‌ರಾಜ್‌ ಇಲಾಖೆ ವ್ಯಾಪ್ತಿ 4,194 ಕೂಲಿ ಆಳಿಗೆ ಒಟ್ಟು 1.25 ಕೋಟಿ, ತೋಟಗಾರಿಕೆ, ಅರಣ್ಯ, ಕೃಷಿ ಇಲಾಖೆ ವ್ಯಾಪ್ತಿ ನಿರ್ವಹಿಸಿದ ಕಾಮಗಾರಿಗಳ ಕೂಲಿ ಸುಮಾರು 30 ಲಕ್ಷ ರೂ. ಮೊತ್ತವನ್ನು ಸರಕಾರ ಬಿಡುಗಡೆ ಮಾಡಬೇಕಿದೆ.



Read more