ಹೈಲೈಟ್ಸ್:
- ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕಿರಣ್ ರಾಜ್ ಮಾಡಿದ ಕೆಲಸ ಇದು..
- ಬಡಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ ಕಿರಣ್ ರಾಜ್
- ಸಮಾಜ ಸೇವೆ ಮಾಡುವುದರಲ್ಲಿ ಕಿರಣ್ ರಾಜ್ ಸದಾ ಮುಂದು
ಕ್ರಿಸ್ಮಸ್ ಸಂದರ್ಭದಲ್ಲಿ ಬೆಂಗಳೂರಿನ ಕೆಲವೆಡೆ ತೆರಳಿ ಬಡಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ್ದಾರೆ ನಟ ಕಿರಣ್ ರಾಜ್. ಬಡಮಕ್ಕಳನ್ನು ಸ್ವತಃ ಭೇಟಿ ಮಾಡಿದ ಕಿರಣ್ ರಾಜ್, ಮಕ್ಕಳಿಗೆ ಅವಶ್ಯವಿರುವ ನೋಟ್ಬುಕ್ಗಳನ್ನು ಕೊಟ್ಟಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿದ ‘ಕನ್ನಡತಿ’ ಧಾರಾವಾಹಿ ನಟ ಕಿರಣ್ ರಾಜ್!
ಸಮಾಜ ಸೇವೆ ಮಾಡುವಲ್ಲಿ ಕಿರಣ್ ರಾಜ್ ನಿರತ
ಸಮಾಜ ಸೇವೆ ಮಾಡುವಲ್ಲಿ ನಿರತರಾಗಿರುವ ಕಲಾವಿದರ ಪೈಕಿ ಮುಂಚೂಣಿಯಲ್ಲಿರುವವರು ಕಿರಣ್ ರಾಜ್. ತಮ್ಮ ಗಳಿಕೆಯಲ್ಲಿ ಒಂದಷ್ಟು ಪಾಲನ್ನು ಬಡವರಿಗೆ ಸಹಾಯ ಮಾಡಲೆಂದೇ ಕಿರಣ್ ರಾಜ್ ಮೀಸಲಿಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅನಾಥಾಶ್ರಮ, ಬಡವರ ಮನೆಗೆ ತೆರಳಿದ ಕಿರಣ್ ರಾಜ್ ಆಹಾರ ವಿತರಣೆ ಮಾಡಿದ್ದರು. ಲಾಕ್ಡೌನ್ ಸಮಯದಲ್ಲಿ ಹಲವರಿಗೆ ಕಿರಣ್ ರಾಜ್ ಸಹಾಯ ಹಸ್ತ ಚಾಚಿದ್ದರು.
ಕಳೆದ ಗಣೇಶ ಚತುರ್ಥಿ ಹಬ್ಬದ ದಿನ ಬಡವರಿಗೆ ಹಾಗೂ ಮಂಗಳಮುಖಿಯರಿಗೆ ಕಿರಣ್ ರಾಜ್ ಊಟ ಹಾಕಿಸಿದ್ದರು. ಇದೀಗ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಶ್ಯಕವಿರುವ ಪುಸ್ತಕಗಳನ್ನು ಕಿರಣ್ ರಾಜ್ ವಿತರಿಸಿದ್ದಾರೆ.
ಪಿಪಿಇ ಕಿಟ್ ಹಾಕಿಕೊಳ್ಳುವ ವ್ಯಕ್ತಿಯ ಪರಿಸ್ಥಿತಿ ಬಗ್ಗೆ ಒಮ್ಮೆ ಯೋಚಿಸಿ: ‘ಕನ್ನಡತಿ’ ನಟ ಕಿರಣ್ ರಾಜ್!
ಅವಶ್ಯವಿರುವವರಿಗೆ ಸಹಾಯ ಮಾಡಬೇಕು
‘’ಬಡವರಿಗೆ, ಅವಶ್ಯವಿರುವವರಿಗೆ ಸಹಾಯ ಮಾಡುವುದು ಮುಖ್ಯವಾಗಿದೆ. ಬಿಕ್ಕಟ್ಟಿನ ಸಮಯದಲ್ಲಾಗಲಿ ಅಥವಾ ಬೇರೆ ಸಮಯದಲ್ಲಾಗಲಿ.. ಎಷ್ಟೋ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಾರೆ. ಅಂಥವರನ್ನು ಗುರುತಿಸಿ, ನಮ್ಮ ಕೈಲಾದ ಸಹಾಯ ಮಾಡಬೇಕಿದೆ’’ ಎಂದು ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಕಿರಣ್ ರಾಜ್ ಹೇಳಿದ್ದರು.
‘ಕನ್ನಡತಿ’ ನಟ ಕಿರಣ್ ರಾಜ್ ಕುಟುಂಬದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯ ಇಲ್ಲಿದೆ
ಕಿರಣ್ ರಾಜ್ ಬಗ್ಗೆ ನಿಮಗೆಷ್ಟು ಗೊತ್ತು?
ಮೂಲತಃ ಮೈಸೂರಿನವರಾದ ಕಿರಣ್ ರಾಜ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಕಿರಣ್ ರಾಜ್ ತಂದೆ ಸುರೇಶ್ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆಳ್ವಾಸ್ ಕಾಲೇಜ್ನಲ್ಲಿ ಕಿರಣ್ ರಾಜ್ ಬಿಸಿಎ ಮುಗಿಸಿದ್ದಾರೆ. ಇವರ ನಟನಾ ಜೀವನ ಶುರುವಾಗಿದ್ದು ಹಿಂದಿಯ ಧಾರಾವಾಹಿಯಿಂದ. ಹಿಂದಿಯಲ್ಲಿ ‘ಹೀರೋಸ್’, ‘ಲವ್ ಬೈ ಚಾನ್ಸ್’, ‘ಕನೆಕ್ಷನ್ ಆಫ್ ಟೀನೇಜರ್ಸ್’ ಮುಂತಾದ ಸೀರಿಯಲ್ಗಳಲ್ಲಿ ಕಿರಣ್ ರಾಜ್ ಕಾಣಿಸಿಕೊಂಡಿದ್ದಾರೆ.
ಕನ್ನಡದ ‘ದೇವತೆ’, ‘ಗುಂಡ್ಯಾನ್ ಹೆಂಡ್ತಿ’, ‘ಚಂದ್ರಮುಖಿ’, ‘ಕಿನ್ನರಿ’ ಧಾರಾವಾಹಿಗಳಲ್ಲಿ ಕಿರಣ್ ರಾಜ್ ಅಭಿನಯಿಸಿದ್ದಾರೆ. ‘ಡ್ಯಾನ್ಸ್ ಡ್ಯಾನ್ಸ್’ ಹಾಗೂ ‘ಲೈಫ್ ಸೂಪರ್ ಗುರು’ ರಿಯಾಲಿಟಿ ಶೋಗಳಲ್ಲಿ ಕಿರಣ್ ರಾಜ್ ಭಾಗವಹಿಸಿದ್ದರು. ಸದ್ಯ ‘ಬಹದ್ದೂರ್ ಗಂಡು’, ‘ಬಡ್ಡೀಸ್’, ‘ವಿಕ್ರಮ್ ಗೌಡ’ ಮುಂತಾದ ಸಿನಿಮಾಗಳಲ್ಲಿ ಕಿರಣ್ ರಾಜ್ ನಟಿಸುತ್ತಿದ್ದಾರೆ.